Advertisement

ಮಹಿಳೆಯ ಕತ್ತು ಕುಯ್ದು ಹತ್ಯೆ

10:49 AM May 10, 2019 | Team Udayavani |

ಬೆಂಗಳೂರು: ಒಂಟಿ ಮಹಿಳೆಯೊಬ್ಬರ ಕತ್ತುಕುಯ್ದು ಕೊಲೆಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಇಸ್ರೋ ಲೇಔಟ್‌ನ ವಲ್ಲಭನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಭಾಗ್ಯಮ್ಮ (45) ಕೊಲೆಯಾದವರು.

Advertisement

ಹೂವಿನ ವ್ಯಾಪಾರಿಯಾಗಿರುವ ಭಾಗ್ಯಮ್ಮ ಮೂರುದಿನಗಳಿಂದ ವ್ಯಾಪಾರಕ್ಕೆ ಆಗಮಿಸಿರಲಿಲ್ಲ. ಹೀಗಾಗಿ, ಆಕೆಯಿಂದ ಪಿಗ್ಮಿಹಣ ಕಟ್ಟಿಸಿಕೊಳ್ಳುವರು ಹಾಗೂ ಸ್ಥಳೀಯರು ಅವರ ಮಂಡ್ಯದಲ್ಲಿರುವ ಅವರ ಸಹೋದರನಿಗೆ ಪೋನ್‌ ಮಾಡಿ ಕೇಳಿದ್ದಾರೆ. ಆಗ ಅವರು ಕೂಡ ಇಲ್ಲಿಗೆ ಬಂದಿಲ್ಲ ಎಂದಾಗ ಅವರು ವಾಸವಿದ್ದ ಶೀಟ್ ಮನೆ ಬಳಿ ತೆರಳಿ ಗಮನಿಸಿದಾಗ ದುರ್ವಾಸನೆ ಬಂದಿದ್ದು, ಕೂಡಲೇ ಸುಬ್ರಹ್ಮಣ್ಯಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ದೇಹ ಕೊಳೆತ ಸ್ಥಿತಿಯಲ್ಲಿದ್ದು ಭಾಗ್ಯಮ್ಮ ಕೊಲೆಯಾಗಿವುದು ಗೊತ್ತಾಗಿದೆ. ಮಂಡ್ಯ ಮೂಲದ ಭಾಗ್ಯಮ್ಮ ವಲಭನಗರದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಅವರ ಮನೆ ಸಮೀಪವೇ ಇದ್ದ ಯುವಕರು, ರಾತ್ರಿ ಕುಡಿದು ಗಲಾಟೆ ಮಾಡುವ ವಿಚಾರಕ್ಕೆ ಭಾಗ್ಯಮ್ಮ ಬೈದಿದ್ದರು ಎಂಬ ಮಾಹಿತಿಯಿದೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next