Advertisement

Theft Case: ಬಸ್ಸಿನಲ್ಲಿ ಮಹಿಳೆಯ ಚಿನ್ನಾಭರಣ ಕಳವು

12:51 AM Oct 09, 2024 | Team Udayavani |

ಕಾಪು: ಬೆಂಗಳೂರಿನಿಂದ ಕಾಪುವಿಗೆ ಬಸ್‌ನಲ್ಲಿ ಆಗಮಿಸಿದ್ದ ಮಹಿಳೆಯ ಬ್ಯಾಗ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಎಗರಿಸಿದ ಘಟನೆ ಬೆಳಕಿಗೆ ಬಂದಿದೆ.

Advertisement

ಕಾಪು ಪಡುಗ್ರಾಮದ ಅಮೂಲ್ಯಾ ಸುಕೇಶ ಅವರು ಅ. 5ರಂದು ಬೆಂಗಳೂರಿನಿಂದ ಕಾಪುವಿಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.ಊರಿಗೆ ಬರಲೆಂದು ಮನೆಯಿಂದ ಚಿನ್ನಾಭರಣಗಳಿದ್ದ ಡಬ್ಬವನ್ನು ಬ್ಯಾಗ್‌ನಲ್ಲಿ ಇರಿಸಿಕೊಂಡು ಪತಿಯೊಂದಿಗೆ ಹೊರಟಿದ್ದರು.

ಎಂ.ಜಿ. ರಸ್ತೆಯಲ್ಲಿ ಇಬ್ಬರೂ ಒಂದು ಮೀಟಿಂಗ್‌ನಲ್ಲಿ ಭಾಗವಹಿಸಿ ಬಳಿಕ ವಸಂತ ನಗರದಲ್ಲಿ ಹೋಟೆಲ್ನಲ್ಲಿ ಊಟ ಮಾಡಿ ಅಲ್ಲಿಂದ ಅಮೂಲ್ಯ ಅವರೊಬ್ಬರೇ ರಾತ್ರಿ 11.30 ರ ವೇಳೆಗೆ ಬಸ್ಸು ಹತ್ತಿದ್ದರು. ಆ ವೇಳೆ ಬ್ಯಾಗನ್ನು ಕಾಲುಗಳ ಮಧ್ಯೆ ಇಟ್ಟುಕೊಂಡಿದ್ದರು.

ಅ. 6ರಂದು ಬೆಳಗ್ಗೆ ಕಾಪುವಿಗೆ ತಲುಪಿ ಬಸ್ಸಿನಿಂದಿಳಿದು ಮಾವನ ಕಾರಿನಲ್ಲಿ ಮನೆ ತಲುಪಿದ್ದರು. ಮನೆಯ ಕೋಣೆಯಲ್ಲಿ ಚಿನ್ನಾಭರಣಗಳಿದ್ದ ಬ್ಯಾಗ್‌ ಅನ್ನು ಇರಿಸಿದ್ದು ಬಳಿಕ ಬ್ಯಾಗಿನಲ್ಲಿದ್ದ ಚಿನ್ನಾಭರಣಗಳನ್ನು ತೆಗೆಯಲು ನೋಡಿದಾಗ ಅದಿರಿಸಿದ್ದ ಚಿಕ್ಕ ಚೀಲ ಮತ್ತು ಚಿಕ್ಕ ಡಬ್ಬ ಕಾಣದೆಕಳವಾಗಿರುವುದು ಗೊತ್ತಾಗಿದೆ ಎಂದು ಕಾಪು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next