Advertisement

Kundapura: ಹೊಟ್ಟೆಗೆ ಇರಿತ; ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

08:47 PM Oct 08, 2024 | Team Udayavani |

ಕುಂದಾಪುರ: ಅಂಪಾರಿನ ನಾಗಶ್ರೀ ಬಾರಿನಲ್ಲಿ ಕಳೆದ ತಿಂಗಳು ಸಹೋದರರಿಬ್ಬರಿಗೆ ಹಲ್ಲೆಗೈದ ಆರೋಪಿಗಳಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

Advertisement

ಅಂಪಾರಿನ ಸುಜಯ ಹಾಗೂ ಅಜಯ ಎಂಬುವರಿಗೆ ಸೋಡಾ ಬಾಟಲಿಯಿಂದ ಹೊಟ್ಟೆಗೆ ಇರಿದು, ಹಲ್ಲೆ ಮಾಡಿದ್ದ ಆರೋಪಿಗಳಾದ ಅವಿನಾಶ್‌, ಪ್ರಜ್ವಲ್‌, ಸ್ವರಾಜ್‌ ಹಾಗೂ ನಿರಂಜನ್‌ಗೆ ನ್ಯಾಯಾಲಯವು ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿದೆ. ಈ ಪ್ರಕರಣ ಸಂಬಂಧ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪರ ಕುಂದಾಪುರ ನ್ಯಾಯವಾದಿ ಹಂದಕುಂದ ಅಶೋಕ ಶೆಟ್ಟಿ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next