Advertisement

Savanuru ಮನೆಯಂಗಳಕ್ಕೆ ಬಂದು ಅಪರಿಚಿತರಿಂದ ಬೆದರಿಸಿ ಮಹಿಳೆಗೆ ಹಲ್ಲೆ ಆರೋಪ, ಪ್ರಕರಣ ದಾಖಲು

01:12 AM Sep 05, 2023 | Team Udayavani |

ಸವಣೂರು: ವಿದ್ಯುತ್‌ ಸಂಪರ್ಕದ ಮೈನ್‌ ಸ್ವಿಚ್‌ ಆಫ್ ಮಾಡಿ ಮನೆಯೊಳಗಿದ್ದ ವ್ಯಕ್ತಿಯೊಬ್ಬರನ್ನು ಹೊರಗೆ ಕರೆದು ಅಪರಿಚಿತರು ಬೆದರಿಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಕೊಳ್ತಿಗೆ ಗ್ರಾಮದ ಮಹಿಳೆಯೊಬ್ಬರು ಬೆಳ್ಳಾರೆ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

ಕೊಳ್ತಿಗೆ ಗ್ರಾಮದ ಚಿತ್ರಪ್ರಭ ಶೆಟ್ಟಿ ಅವರು ಠಾಣೆಗೆ ದೂರು ನೀಡಿದ್ದು, ಸೆ. 1ರಂದು ರಾತ್ರಿ ವಾಸ್ತವ್ಯದ ಮನೆ ಬಳಿ ಪರಿಚಯದ ಮಹಿಳೆ ಮತ್ತು ಮಂಕಿ ಕ್ಯಾಪ್‌ ಹಾಗೂ ಕುತ್ತಿಗೆಗೆ ಶಾಲು ಹಾಕಿದ ನಾಲ್ಕರಿಂದ ಐದು ಮಂದಿ ಅಪರಿಚಿತ ವ್ಯಕ್ತಿಗಳು ಬಂದು ಮನೆಯ ವಿದ್ಯುತ್‌ ಸಂಪರ್ಕದ ಮೈನ್‌ ಸ್ವಿಚ್‌ ಆಫ್ ಮಾಡಿ ತನ್ನ ಗಂಡನನ್ನು ಮನೆಯ ಒಳಗಿನಿಂದ ಹೊರಗೆ ಕರೆದು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಇಲ್ಲಿಯೇ ಕೊಚ್ಚಿ ಹಾಕುವುದಾಗಿ ಬೆದರಿಸಿದ್ದಾರೆಂದು ಆರೋಪಿಸಲಾಗಿದೆ.

ತನ್ನಲ್ಲಿ ಈಗಾಗಲೇ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ನಿಮ್ಮ ಇಡೀ ಕುಟುಂಬವನ್ನು ನಾಶ ಮಾಡುವುದಾಗಿ ಬೆದರಿಸಿ ಮನೆ ಬಾಗಿಲಿಗೆ ದೊಣ್ಣೆ, ಕಲ್ಲು, ಬಿಯರ್‌ ಬಾಟಲ್‌ನಿಂದ ಬಡಿದು ಬೆದರಿಸಿರುವುದಾಗಿ ಚಿತ್ರಪ್ರಭಾ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆ ವೇಳೆ 112 ಸಹಾಯವಾಣಿಗೆ ಕರೆ ಮಾಡಿದ್ದು, ಈ ವಿಚಾರ ತಿಳಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಜಮೀನು ತಕರಾರಿಗೆ ಸಂಬಂಧಿಸಿ ತನಗೆ ಬೈದು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ಜಮೀನು ತಕರಾರು ಕುರಿತು ಮಹಿಳೆಯೊಬ್ಬರ ಮೇಲೆ ದೂರು ಅರ್ಜಿ ನೀಡಿರುವ ದ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ಕುರಿತು ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next