Advertisement

ಕೆಸರಲ್ಲೇ ವಾರದ ಸಂತೆ-ಆಕ್ರೋಶ

05:05 PM Nov 14, 2021 | Team Udayavani |

ಲಿಂಗಸುಗೂರು: ಪಟ್ಟಣದಲ್ಲಿ ವಾರದ ಸಂತೆ ಗಲೀಜಿನಲ್ಲೇ ನಡೆಯುತ್ತಿದೆ. ಸ್ವತ್ಛತೆಗೆ ನಿಗಾವಹಿಸಬೇಕಾದ ಪುರಸಭೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

Advertisement

ವಾರದ ಸಂತೆಯ ಪ್ರಾಂಗಣದಲ್ಲಿ ಚರಂಡಿ ನೀರು ಹರಿಯುತ್ತಿದ್ದು, ಈ ಗಲೀಜು ನೀರಲ್ಲೇ ಕುಳಿತು ತರಕಾರಿ ಮಾರಾಟ-ಖರೀದಿ ಮಾಡಬೇಕಾಗಿದೆ. ಪ್ರತಿವರ್ಷ ವಾರದ ಸಂತೆ ಹರಾಜಿನಿಂದ ಪುರಸಭೆ ಲಕ್ಷಾಂತರ ರೂ. ಆದಾಯ ಬರುತ್ತಿದ್ದರೂ ಪುರಸಭೆ ಆಡಳಿತ ಮಂಡಳಿ ವಾರದ ಸಂತೆ ಸ್ವತ್ಛತೆಗೆ ಮಾತ್ರ ಆಸಕ್ತಿ ತೋರುತ್ತಿಲ್ಲ ಇದರಿಂದ ಸಂತೆ ರೋಗಗಳ ತಾಣವಾಗಿದೆ. ಆದ್ದರಿಂದ ಪುರಸಭೆ ಮುಖ್ಯಾಧಿಕಾರಿಗಳು ಈ ಕುರಿತು ಗಮನ ಹರಿಸಿ ವಾರದ ಸಂತೆ ಪ್ರಾಂಗಣ ಸ್ವತ್ಛಗೊಳಿಸಿ ಅಗತ್ಯ ಸೌಲಭ್ಯ ಒದಗಿಸುವಂತೆ ಪುರಸಭೆ ಮಾಜಿ ಅಧ್ಯಕ್ಷ ಖಾದರಪಾಶಾ, ಕರವೇ ಅಧ್ಯಕ್ಷ ಖಾದರಪಾಶಾ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next