Advertisement

“ಭಾರತೀಯ ಸಂಸ್ಕೃತಿಯಲ್ಲಿ ಗುರುಪರಂಪರೆಗೆ ವಿಶಿಷ್ಟ ಸ್ಥಾನ’

08:18 PM Jul 17, 2019 | Team Udayavani |

ಕಾಸರಗೋಡು: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್‌ ಸೆಕೆಂಡರಿ ಶಾಲೆಯ ಪ್ರೌಢಶಾಲಾ ವಿಭಾಗದ ಸಂಸ್ಕೃತ ಸಂಘದ ಆಶ್ರಯದಲ್ಲಿ ಸಂಸ್ಕೃತ ವಿದ್ಯಾರ್ಥಿಗಳ ನೇತೃತ್ವದಲ್ಲಿ ಗುರುಪೂರ್ಣಿಮೆ ಆಚರಿಸಲಾಯಿತು.

Advertisement

ವೇದವ್ಯಾಸರ ಜನ್ಮದಿನವನ್ನು ಗುರುಪೂರ್ಣಿಮೆ ಎಂದು ಆಚರಿಸಲಾಗುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಗುರುಪರಂಪರೆಗೆ ವಿಶಿಷ್ಟ ಸ್ಥಾನ ಇದೆ. ಒಂದು ಕಾಲದಲ್ಲಿ ಗುರುಕುಲದಲ್ಲಿದ್ದು ವಿದ್ಯೆಅರ್ಜಿಸುತ್ತಿದ್ದರು. ಹಾಗಾಗಿ ಶಿಷ್ಯರಿಗೆ ಗುರುಗಳು ತಂದೆ-ತಾಯಿಗಿಂತಲೂ ಮಿಗಿಲಾಗಿದ್ದರು. ಬದುಕಿನ ಕಾಲು ಭಾಗದಷ್ಟು ಗುರುಕುಲದಲ್ಲಿ ವಿನಿಯೋಗಿಸಿ ಗುರುಸೇವೆಯನ್ನು ಉತ್ತಮ ರೀತಿಯಲ್ಲಿ ಕೈಗೊಂಡ ಶಿಷ್ಯನಿಗೆ ಉತ್ತಮ ಶಿಷ್ಯನಾಗಿಯೂ, ಉತ್ತಮ ಪ್ರಜೆ ಯಾಗಿಯೂ ಸಮಾಜದಲ್ಲಿ ಮುಂದೆ ಬರಲು ಸಾಧ್ಯ ಎಂಬ ನಿಲುವು ನಮ್ಮ ಸಂಸ್ಕೃತಿಯದ್ದು.

ಈಗಿನ ನಮ್ಮ ಶಿಕ್ಷಣ ಸಂಸ್ಕೃತಿಯಲ್ಲಿ ಗುರುಗಳನ್ನು ಕೂಡ ವಂದಿಸುವಂತೆ ಆಗಬೇಕು. ಆದರೆ ಈಗಿನ ಕಾಲದಲ್ಲಿ ವಿದ್ಯಾರ್ಥಿ ಒಲವಿಗೆ ಹೆಚ್ಚು ಮಹತ್ತರ ಸ್ಥಾನ ನೀಡುವ ಕಾರಣ ನಮ್ಮ ಪರಂಪರಾಗತ ಗುರುಗಳ ಸ್ಥಾನಮಾನ ಕ್ಷೀಣಿಸುತ್ತಾ ಬರುತ್ತದೆ.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹೈಯರ್‌ ಸೆಕೆಂಡರಿ ಶಾಲೆಯ ಅಧ್ಯಾಪಕ ಸತೀಶ ಶೆಟ್ಟಿ ಒಡ್ಡಂಬೆಟ್ಟು ಮಾತನಾಡಿ ಗು ಎಂದರೆ ಕತ್ತಲು, ರು ಎಂದರೆ ಬೆಳಕು ಎಂದರ್ಥ. ತಲತಲಾಂತರಗಳಿಂದ ಬಂದ ಸಂಪ್ರದಾಯವಾದ ಗುರುಗಳನ್ನು ಗೌರವಿಸುವ ರೀತಿ ನಮ್ಮ ಇಂದಿನ ಶಿಕ್ಷಣ ರೀತಿಯಲ್ಲಿ ಬರಬೇಕು ಎಂದರು.

ಶಾಲಾ ಮುಖ್ಯ ಶಿಕ್ಷಕ ಎನ್‌.ರಾಮಚಂದ್ರ ಭಟ್‌ ಶುಭಾಶಂಸನೆಗೈದು ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿ ಬದಲಾಗಿ ಶಾಲೆಯಲ್ಲಿಯೂ ಕೂಡ ಗುರುಗಳನ್ನು ಶಿಷ್ಯರು ಪೂಜನೀಯ ಮನೋಭಾವದಿಂದ ಗೌರವಿಸುವಂತೆ ಆಗಬೇಕು. ಈ ತಿಂಗಳ ಪೂರ್ತಿ ಹಲವೆಡೆ ದೇವರನ್ನು ಪೂಜಿಸುತ್ತಾರೆ. ಕೇರಳದಲ್ಲಿ ರಾಮಾಯಣ ಪಾರಾಯಣ ಮಾಡುತ್ತಾರೆ. ಹಾಗಾಗಿ ರಾಮಾಯಣ ಮಾಸಾಚರಣೆ ಅಂತ ಈ ತಿಂಗಳು ಪೂರ್ತಿ ತಿಳಿಯಲ್ಪಡುತ್ತದೆ.

Advertisement

ಹಿರಿಯ ಅಧ್ಯಾಪಕ ಗೋವಿಂದ ಭಟ್‌ ಶುಭಾಶಂಸನೆಗೈದು ಮಾತನಾಡಿ, ಅಧ್ಯಾಪಕರ ದಿನ ಎಂಬುದು ಭಾರತೀಯ ಸನಾತನ ಪರಂಪರೆಯಲ್ಲಿ ಗುರು ಪೂರ್ಣಿಮೆಯಾಗಿದ್ದು, ಇದನ್ನು ಎಲ್ಲ ಶಾಲೆಗಳಲ್ಲಿಯೂ ಆಚರಿಸುವಂತಾಗಬೇಕು. ಸಂಸ್ಕೃತ ಅಧ್ಯಾಪಕ ಶಿವನಾರಾಯಣ ಭಟ್‌ ಅವರ ಮಾರ್ಗ ದರ್ಶನದಲ್ಲಿ ಶಾಲೆಯಲ್ಲಿ ತಿಂಗಳು ಪೂರ್ತಿ ನಡೆಸಲಿರುವ ಶ್ರೀ ರಾಮರûಾ ಸ್ತೋತ್ರ ಪಠಣಕ್ಕಿರುವ ರಾಮರûಾ ಸ್ತೋತ್ರ ಪುಸ್ತಕವನ್ನು ಈ ಸಂದರ್ಭದಲ್ಲಿ ವಿತರಿಸಿ ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.

ಶಾರದಾ ಸುರಭಿ ಸ್ವಾಗತಿಸಿ, ಸಂಸ್ಕೃತ ಸಂಘದ ಜತೆ ಕಾರ್ಯದರ್ಶಿ ಅಕ್ಷಯ ಗಣಪತಿ ವಂದಿಸಿದರು. ಸಂಸ್ಕೃತ ಸಂಘದ ಕಾರ್ಯದರ್ಶಿ ವಿಶ್ವಜಿತ್‌ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲ ಅಧ್ಯಾಪಕರು ಕಾರ್ಯಕ್ರಮಕ್ಕೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next