Advertisement

ಕೊರೊನಾ ಭೀತಿ:ಬಾಗಲಕೋಟೆ ಜಿಲ್ಲೆಯಾದ್ಯಂತ ಕಳೆದ ಐದು ದಿನದಲ್ಲಿ 278 ವಿದೇಶಿಗರ ಭೇಟಿ

10:08 AM Mar 16, 2020 | sudhir |

ಬಾಗಲಕೋಟೆ : ವಿಶ್ವದೆಲ್ಲೆಡೆ ಕೊರೊನಾ ಭೀತಿ ಹೆಚ್ಚುತ್ತಿರುವಾಗಲೇ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಕೇವಲ ಐದು ದಿನಗಳಲ್ಲಿ 278 ಜನ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

Advertisement

ಹೌದು, ದೇಶದ ಯಾವುದೇ ಭಾಗಕ್ಕೆ ವಿದೇಶಿಗರು ಬಂದರೆ, ಭಾರತೀಯರು ವಿದೇಶಕ್ಕೆ ಹೋಗಿ ಮರಳಿದರೆ ಅವರ ಆರೋಗ್ಯ ತಪಾಸಣೆ ಮಾಡುವ ಜತೆಗೆ 14 ದಿನಗಳ ಕಾಲ ಮನೆಯಲ್ಲಿಯೇ ಇದ್ದು, ಆರೋಗ್ಯದ ಕುರಿತು ನಿಗಾ ವಹಿಸಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಅದರಲ್ಲೂ ಮಾ. 13ರಿಂದ ಯಾರೇ ವಿದೇಶಿಗರು ಬಂದಲ್ಲಿ, ನಮ್ಮವರು ವಿದೇಶಕ್ಕೆ ಹೋಗಿ ಮರಳಿದ್ದಲ್ಲಿ ಅವರನ್ನು ಕಡ್ಡಾಯವಾಗಿ ಗೃಹ ಬಂಧನದಲ್ಲಿಡಲಾಗುತ್ತಿದೆ.

ಐದು ದಿನದಲ್ಲಿ 278 ವಿದೇಶಿಗರು :
ಜಿಲ್ಲೆಯ ಅಂತರ್‌ರಾಷ್ಟ್ರೀಯ ಪ್ರವಾಸಿ ತಾಣ ಪಟ್ಟದಕಲ್ಲ, ರಾಷ್ಟ್ರೀಯ ಸ್ಮಾರಕಗಳಾದ ಬಾದಾಮಿ, ಐಹೊಳೆ ಮುಂತಾದ ಪ್ರವಾಸಿ ತಾಣಗಳಿಗೆ ಮಾ. 10ರಿಂದ ಮಾ. 15ರ ವರೆಗೆ ಒಟ್ಟು 278 ಜನ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಅದರಲ್ಲಿ ಅತಿಹೆಚ್ಚು ರಷ್ಯಾ, ಪ್ರಾನ್ಸ ದೇಶದ ಪ್ರಜೆಗಳೇ ಹೆಚ್ಚು ಭೇಟಿ ನೀಡಿದ್ದು,ಅಮೆರಿಕ, ಬ್ರಿಟನ್ ಹಾಗೂ ಕೆನಡಾ ದೇಶದ ಪ್ರವಾಸಿಗರೂ ಬಂದು ಹೋಗಿದ್ದಾರೆ.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಆರೋಗ್ಯ ತಪಾಸಣೆ ಮಾಡಿದ್ದು, ಮಾಸ್ಕ ಧರಿಸಿಯೇ, ಪ್ರವಾಸಿ ತಾಣಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೂ, ಮುಂಜಾಗೃತೆ ವಹಿಸಲು ಪ್ರವಾಸಿ ತಾಣಗಳಲ್ಲಿ ಗೈಡ್‌ಗಳು, ಭದ್ರತಾ ಸಿಬ್ಬಂದಿಗಳ ಆರೋಗ್ಯವೂ ತಪಾಸಣೆ ಮಾಡಲಾಗಿದೆ.

Advertisement

ಒಂದು ವಾರ ಬಂದ್ :
ಕೊನೊರಾ ಭೀತಿಯಲ್ಲೂ ದೇಶ- ವಿದೇಶಿಗರ ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ. ಮಾ. 15ರ ಬೆಳಗ್ಗೆ 6ರಿಂದ ಮಾರ್ಚ 22ರ ಬೆಳಗ್ಗೆ 6ರ ವರೆಗೆ ಭಾರತೀಯರು, ವಿದೇಶಿಗರು ಹಾಗೂ ಸ್ಥಳೀಯರ್‍ಯಾರೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವಂತಿಲ್ಲ. ಅದರಲ್ಲೂ ಪ್ರವಾಸಿ ತಾಣಗಳಲ್ಲಿ ಗುಂಪು ಗುಂಪಾಗಿ ಬಂದು ವೀಕ್ಷಣೆ ಮಾಡುವಂತಿಲ್ಲ. ಈ ಕುರಿತು ಬಾಗಲಕೋಟೆಯ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ, ಅಧಿಕೃತ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next