Advertisement

3 ವರ್ಷಗಳಿಂದ ರಸ್ತೆ ಬದಿ ನಿಂತಿದೆ ಕಲ್ಲು ತುಂಬಿದ ಟಿಪ್ಪರ್‌ !

12:24 PM Jun 25, 2020 | mahesh |

ಮಹಾನಗರ: ನಗರದ ಮರೋಳಿ ಬಳಿ ರಸ್ತೆ ಬದಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಲ್ಲು ತುಂಬಿದ ಟಿಪ್ಪರ್‌ ನಿಲ್ಲಿಸಲಾಗಿದ್ದು, ಇದರಿಂದಾಗಿ ಸ್ಥಳೀಯರಿಗೆ ಮತ್ತು ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಕುಲಶೇಖರ ಕಡೆಯಿಂದ ಪಡೀಲ್‌ ಕಡೆಗೆ ತೆರಳುವಾಗ ವಾಹನ ಸವಾರರಿಗೆ ಈ ಟಿಪ್ಪರ್‌ ಸ್ಪಷ್ಟವಾಗಿ ಕಾಣದೆ ಅಪಘಾತ ಉಂಟಾಗುವ ಸಾಧ್ಯತೆ ಇದೆ. ಕಳೆದ ಕೆಲ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಪೊಲೀಸ್‌ ಠಾಣೆ ಇತ್ತು. ಆ ವೇಳೆ ಮುಟ್ಟುಗೋಲು ಹಾಕಿದ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗುತ್ತಿತ್ತು. ಇದೀಗ ವಾಮಂಜೂರಿಗೆ ಪೊಲೀಸ್‌ ಠಾಣೆ ಸ್ಥಳಾಂತರವಾಗಿದೆ. ಆದರೆ ಟಿಪ್ಪರ್‌ ಮಾತ್ರ ರಸ್ತೆ ಬದಿಯಲ್ಲೇ ನಿಲ್ಲಿಸಲಾಗಿದೆ.

Advertisement

“ಈಗಾಗಲೇ ಮಳೆಗಾಲ ಆರಂಭವಾಗಿದ್ದು, ನಗರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಹೀಗಿ ದ್ದಾಗ ವಾಹನಗಳು ತುಕ್ಕು ಹಿಡಿದು ನೀರು ನಿಲ್ಲುವ ಸಾಧ್ಯತೆ ಹೆಚ್ಚಿದೆ. ಇನ್ನು, ಈ ಟಿಪ್ಪರ್‌ನ ಕೆಲ ಭಾಗ ಈಗಾಗಲೇ ತುಕ್ಕು ಹಿಡಿದಿದೆ. ಬಿಡಿ ಭಾಗಗಳೆಲ್ಲ ಹಾಳಾಗಿವೆ. ಹೀಗಿರುವಾಗ ಟಿಪ್ಪರ್‌ ಅನ್ನು ತೆರವು ಮಾಡಬೇಕು’ ಎನ್ನುತ್ತಾರೆ ಸ್ಥಳೀಯರಾದ ಗಾವಳಿ ಸುರೇಶ್‌ ಎನ್‌. ಶೆಟ್ಟಿ ಅವರು. ಈ ಬಗ್ಗೆ ಮಂಗಳೂರು ಟ್ರಾಫಿಕ್‌ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ಈ ಹಿಂದೆ ಮರೋಳಿಯಲ್ಲಿ ಗ್ರಾಮಾಂತರ ಪೊಲೀಸ್‌ ಠಾಣೆ ಇತ್ತು. ಆ ಸಂದರ್ಭ ಮುಟ್ಟುಗೋಲು ಹಾಕಿದ ವಾಹನ ಇದಾಗಿದೆ. ಆದರೆ ಪೊಲೀಸ್‌ ಠಾಣೆ ಸದ್ಯ ವಾಮಂಜೂರಿಗೆ ಸ್ಥಳಾಂತರ ಮಾಡಲಾಗಿದೆ. ಈ ಟಿಪ್ಪರ್‌ ತೆರವು ಮಾಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next