Advertisement

23 ವರ್ಷ ಬಳಿಕ ಸೆರೆ ಸಿಕ್ಕ ಕಳ್ಳ ಸಾಗಣೆದಾರ

09:12 AM Jul 18, 2020 | mahesh |

ಮುಂಬಯಿ: ಅಕ್ರಮ ವಜ್ರ ಕಳ್ಳಸಾಗಣೆ ಮೂಲಕ ಸರಕಾರಕ್ಕೆ 130 ಕೋಟಿ ರೂ. ವಂಚಿಸಿದ್ದ ಖತ ರ್ನಾಕ್‌ ವ್ಯಾಪಾರಿ ಬರೋಬ್ಬರಿ 23 ವರ್ಷಗಳ ಬಳಿಕ ಸೆರೆ ಸಿಕ್ಕಿದ್ದಾನೆ. ಪವೇಶ್‌ ಜಾವೇರಿ (53) ಎಂಬಾತ ಸಿಂಗಾಪುರದಿಂದ ಕಚ್ಚಾ ಚಿನ್ನ ಹಾಗೂ ವಜ್ರವನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳುತ್ತಿದ್ದನು. ಈ ಸಂಬಂಧ 130 ಕೋಟಿ ರೂ. ತೆರಿಗೆ ವಂಚಿಸಿದ್ದನು. ಈ ಕುರಿತು 1997ರಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. ಈ ವೇಳೆ ಪವೇಶ್‌ ಜಾವೇರಿ ತಲೆ ಮರೆಸಿಕೊಂಡಿದ್ದನು. ಮುಂಬಯಿ ಅಪರಾಧ ವಿಭಾಗದ ಪೊಲೀಸರು ಕಡೆಗೂ ಬೆನ್ನತ್ತಿ 23 ವರ್ಷಗಳ ಬಳಿಕ ಪರೇಶ್‌ನನ್ನು ಸೆರೆ ಹಿಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next