Advertisement

ಬೇರೆ ಶಾಲೆಗೆ ಸೇರಲು ಟೀಸಿ ನೀಡದ ಶಾಲೆ

05:55 PM Oct 27, 2021 | Team Udayavani |

ಶ್ರೀರಂಗಪಟ್ಟಣ: ಸರ್ಕಾರಿ ಶಾಲೆಗೆ ಸೇರಲು ಖಾಸಗಿ ಶಾಲೆಯ ವಿದ್ಯಾರ್ಥಿ ಯ ಪೋಷಕರು ವರ್ಗಾವಣೆ ಪತ್ರಕ್ಕೆ ಅರ್ಜಿ ಸಲ್ಲಿಸಿದರೂ ಇಲ್ಲಿವರೆಗೆ ನೀಡಿಲ್ಲ ಎಂದು ವಿದ್ಯಾರ್ಥಿಯ ಪೋಷಕರು ಬಿಇಒ ಕಚೇರಿಗೆ ದೂರು ನೀಡಿದ್ದಾರೆ.

Advertisement

ತಾಲೂಕಿನ ಕಿರಂಗೂರು ಗ್ರಾಮದ ಬಳಿಯ ಖಾಸಗಿಯ ಕ್ರೇಂಬಿಡ್ಜ್ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸೃಜನ್‌ ಎಂಬ ವಿದ್ಯಾರ್ಥಿಗೆ ಎರಡನೇ ತರಗತಿಗೆ ಪೋಷಕರು ಕಳೆದ ವರ್ಷ ಶೈಕ್ಷಣಿಕ ವರ್ಷದಲ್ಲಿ ವರ್ಗಾವಣೆ ಪತ್ರ (ಟೀಸಿ) ಕೋರಿ ಎಡೆಡ್‌ ಸರ್ಕಾರಿ ಶಾಲೆಯಿಂದ ಅರ್ಜಿ ಸಲ್ಲಿಸಿರುತ್ತಾರೆ. ಆದರೆ, ಖಾಸಗಿ ಶಾಲೆಯ ಆಡಳಿತ ಮಂಡಳಿ ಶಾಲೆ ಪ್ರಾರಂಭವಾದಾಗ ಕಳುಹಿಸಿಕೊಡುತ್ತೇವೆ ಎಂದು ಹೇಳಿ ಇಲ್ಲಿವರೆಗೆ ಟೀಸಿ ಕಳುಹಿಸದೇ ತಡ ಮಾಡಿದ್ದಾರೆ.

ಇದನ್ನೂ ಓದಿ:- ಆರ್ಯನ್‌ ಖಾನ್‌ ಜಾಮೀನು ಅರ್ಜಿ ವಿಚಾರಣೆ ಇಂದೂ ಮುಂದೂಡಿಕೆ

ಜೂನ್‌ ತಿಂಗಳಲ್ಲಿ ಮತ್ತೆ ಹೋಗಿ ಟಿಸಿ ನೀವು ಕಳುಹಿಸಿಲ್ಲ ಎಂದು ಕೇಳಿದಾಗ ನಿಮ್ಮ ಮಗನನ್ನು ನಾವು ಈಗ ಪಾಸ್‌ ಮಾಡಿದ್ದೇವೆ. ನೀವು ಶಾಲಾ ಶುಲ್ಕವನ್ನು ಸಂಪೂರ್ಣ ಕಟ್ಟಿದ್ದರೆ ಮಾತ್ರ ಟಿಸಿಯನ್ನು ಕಳುಹಿಸಿಕೊಡುತ್ತೇವೆ. ಇಲ್ಲವಾದಲ್ಲಿ ಕೊಡುವುದಿಲ್ಲ ಎಂದು ಶಾಲೆ ಮುಖ್ಯಸ್ಥರು ತಿಳಿಸಿದ್ದು, ಬೇರೆ ದಾರಿ ತೋಚದೇ ಬಿಇಒ ಕಚೇರಿಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಗೆ ನ್ಯಾಯ ಒದಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದನ್‌ ಹಾಗೂ ಅಶೋಕ್‌ ಮತ್ತಿತರರು ಜೊತೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next