Advertisement

ಥಿಯೇಟರನಲ್ಲಿ ಲಕ್ಷ್ಯ ಚಲನಚಿತ್ರ ವೀಕ್ಷಿಸಿದ ಆಹಾರ ನಿಗಮದ ಅಧ್ಯಕ್ಷ ಶಾಸಕ ನಡಹಳ್ಳಿ

03:35 PM Nov 27, 2021 | Team Udayavani |

ಮುದ್ದೇಬಿಹಾಳ: ಇಲ್ಲಿನ ಯು ನಿರ್ದೇಶಕ ರವೀ ಸಾಸನೂರ ನಿರ್ದೇಶಿಸಿದ ಪ್ರಥಮ ಕನ್ನಡ ಚಲನಚಿತ್ರ ಲಕ್ಷ್ಯ ವನ್ನು ಬಿಜೆಪಿ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿಯವರು ಶನಿವಾರ ಇಲ್ಲಿನ ಶ್ರೀ ಗಿರಿಜಾ ಶಂಕರ ಚಿತ್ರಮಂದಿರದಲ್ಲಿ ಸಾಮಾನ್ಯ ಪ್ರೇಕ್ಷಕರೊಂದಿಗೆ ವೀಕ್ಷಿಸಿ ಸರಳತೆ ತೋರುವುದರ ಜೊತೆಗೆ ಚಿತ್ರ ನಿರ್ದೇಶಕರಿಗೆ ಪ್ರೋತ್ಸಾಹ ನೀಡಿದರು.

Advertisement

ಈ ವೇಳೆ ನಿರ್ದೇಶಕ ರವಿ ಸಾಸನೂರ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ಉತ್ತರ ಕರ್ನಾಟಕದ ನಮ್ಮೂರಿನ ಪ್ರತಿಭೆ ಬೆಂಗಳೂರಿನಲ್ಲಿ ನೆಲೆಯೂರಿ ನಿರ್ದೇಶಕನಾಗುವುದು ಸಾಮಾನ್ಯ ಮಾತಲ್ಲ. ಈ ಭಾಗದ ಸಿನಿಪ್ರೀಯರು ಲಕ್ಷ್ಯ ಚಲನ ಚಿತ್ರ ವೀಕ್ಷಿಸಿ ಹೊಸ ಮಾದರಿಯ ಸಂದೇಶ ಹೊಂದಿರುವ ಚಿತ್ರದ ಚಿತ್ರ ತಂಡವನ್ನು ಪ್ರೋತ್ಸಾಹಿಸಬೇಕು ಎಂದರು.

ಸಹ ಸಂಭಾಷಣೆಕಾರ ಅನೀಲಕುಮಾರ, ಚಿತ್ರಮಂದಿರದ ಮಾಲಿಕರಾದ ಶಿವಾನಂದ ಸಾಲಿಮಠ, ಶಂಕರ ಸಾಲಿಮಠ, ಸಾಲಿಮಠ ಸಹೋದರರು, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಬಿಜೆಪಿ ಯುವ ಘಟಕದ ಅಧ್ಯಕ್ಷ ಪುನೀತ್ ಹಿಪ್ಪರಗಿ ಸೇರಿದಂತೆ ಹಲವರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next