Advertisement

Arrested: ಸಾಲ ವಸೂಲಿ ವೇಳೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ರೌಡಿಶೀಟರ್‌ ಬಂಧನ

12:13 PM Feb 21, 2024 | Team Udayavani |

ಬೆಂಗಳೂರು:  ಸಾಲ ವಸೂಲಿ ಸುಪಾರಿ ಪಡೆದು ಮಹಿಳೆ ಮೇಲೆ ಸಾರ್ವಜನಿಕವಾಗಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಾರಿ ಯಾಗಿದ್ದ ರೌಡಿಶೀಟರ್‌ನನ್ನು ಗೋವಿಂದ ಪುರ ಪೊಲೀಸರು ಮಹಾರಾಷ್ಟ್ರದ ಮುಂಬೈ ನಲ್ಲಿ ಬಂಧಿಸಿದ್ದಾರೆ.

Advertisement

ಗೋವಿಂದಪುರ ಠಾಣೆ ರೌಡಿಶೀಟರ್‌ ನಸ್ರುಲ್ಲಾ ಅಲಿಯಾಸ್‌ ನಸ್ರು(42) ಬಂಧಿತ. ಆರೋಪಿ 2023ರ ನ.26ರಂದು ಸಾನಿಯಾ ಬಾನು ಎಂಬಾಕೆ ಮೇಲೆ ಹಲ್ಲೆ ನಡೆಸಿದ್ದ. ಇದರೊಂದಿಗೆ ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 13 ದರೋಡೆ, ಡಕಾಯಿತಿ, ಸುಲಿಗೆ ಪ್ರಕರಣಗಳಲ್ಲಿ ಕೋರ್ಟ್‌ ಗೆ ಹಾಜರಾಗದೆ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ. ಹೀಗಾಗಿ, ಕೋರ್ಟ್‌ ಈತನ ವಿರುದ್ಧ 10 ಬಾರಿ ಜಾಮೀನು ರಹಿತ ವಾರೆಂಟ್‌ ಹಾಗೂ ಒಂದು ಬಾರಿ ಪ್ರೋಕ್ಲಾಮೇಷನ್‌ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗಾಗಿ ಗೋವಿಂದಪುರ ಠಾಣಾಧಿಕಾರಿ ಜಯರಾಜ್‌, ಪಿಎಸ್‌ಐ ಮಂಜುನಾಥಸ್ವಾಮಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಇತೆರೆಡೆ ಶೋಧ ನಡೆಸಿತ್ತು. ಈ ಮಧ್ಯೆ ಕೆಲ ದಿನಗಳ ಹಿಂದೆ ಆರೋಪಿ ಮುಂಬೈನ ಲ್ಲಿರುವ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿ ಬಂಧಿಸಲಾಗಿದೆ.

ಮಹಿಳೆ ಮೇಲೆ ಹಲ್ಲೆ: ಗೋವಿಂದಪುರ ನಿವಾಸಿ ಸಾನಿಯಾ ಬಾನು ಎಂಬಾಕೆ ಪತಿ ಇಮ್ರಾನ್‌ ಖಾನ್‌, ಡಿ.ಜಿ.ಹಳ್ಳಿ ನಿವಾಸಿ ಮುನ್ನಾ ಎಂಬಾತನಿಂದ ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದರು. ಆರ್ಥಿಕ ಸಮಸ್ಯೆ ಯಿಂದಾಗಿ ಹಣ ವಾಪಸ್‌ ಕೊಟ್ಟಿರಲಿಲ್ಲ. ಹೀಗಾಗಿ ಮುನ್ನಾ, ರೌಡಿಶೀಟರ್‌ ನಸ್ರುಲ್ಲಾಗೆ ಹಣ ವಸೂಲಿಗೆ ಸುಪಾರಿ ನೀಡಿದ್ದ. ಈ ಹಿನ್ನೆಲೆಯಲ್ಲಿ ಆರೋಪಿ 2023ರ ನ.26ರಂದು ಸಾನಿಯಾ ಬಾನು ಅಡ್ಡಗಟ್ಟಿ ಹಲ್ಲೆ ನಡೆಸಿ ಪರಾರಿ ಆಗಿದ್ದ. ದರೋಡೆ, ಡಕಾಯಿತಿ ಸೇರಿ 13 ಪ್ರಕರಣಗಳು ಈತನ ವಿರುದ್ಧ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next