Advertisement

ಶಿವಮೊಗ್ಗ ನಿವಾಸಿ ಉಜಿರೆ ಲಾಡ್ಜ್‌ನಲ್ಲಿ ಆತ್ಮಹತ್ಯೆ

12:05 AM Jul 01, 2023 | Team Udayavani |

ಬೆಳ್ತಂಗಡಿ: ಶಿವನೊಗ್ಗದ ಕೋಟೆ ರೋಡ್‌ನ‌ ಯುವಕ ಬೆಳ್ತಂಗಡಿ ತಾಲೂಕಿನ ಉಜಿರೆಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೂ. 29ರಂದು ಬೆಳಕಿಗೆ ಬಂದಿದೆ.

Advertisement

ಶಿವಮೊಗ್ಗ ಜಿಲ್ಲೆ ಕೋಟೆ ರೋಡ್‌ ಅಪ್ಪಾಜಿರಾವ್‌ ಕಾಂಪೌಂಡ್‌ ನಿವಾಸಿ ಕಾರ್ತಿಕ್‌ (29) ಅವರು ಜೂ. 26ರಂದು ಉಜಿರೆಯ ಮಾವಂತೂರು ಲಾಡ್ಜ್ನಲ್ಲಿ ರೂಂ ಪಡೆದುಕೊಂಡು ಉಳಿದುಕೊಂಡಿದ್ದರು. ಜೂ. 29ರಂದು ರೂಂ ಒಳಗೆ ಹಗ್ಗವನ್ನು ಫ್ಯಾನ್‌ಗೆ ಹಾಕಿ ಪ್ಲಾಸ್ಟಿಕ್‌ ಕುರ್ಚಿಯಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಕಾರ್ತಿಕ್‌ ರೂಮ್‌ ಪಡೆಯುವಾಗ ಇಬ್ಬರು ಇರುವುದಾಗಿ ಹೇಳಿ ರೂಮ್‌ ಪಡೆದಿದ್ದರು. ಬಳಿಕ ರೂಮ್‌ನವರು ಕಾರ್ತಿಕ್‌ ಬಳಿ ಮರುದಿನ ಮತ್ತೂಬ್ಬರು ಬರುವಿಕೆ ಬಗ್ಗೆ ಪ್ರಶ್ನಿಸಿದ್ದರು. ಆತ ಬರುವುದಿಲ್ಲ ಎಂದು ಹೇಳಿ ಬಾಗಿಲು ಹಾಕಿದವರು ಬಾಗಿಲು ತೆರೆದಿರಲಿಲ್ಲ. ಜೂ. 29ರಂದು ಸಿಬಂದಿ ಬಾಗಿಲು ಬಡಿದರೂ, ಕಾರ್ತಿಕ್‌ ಕೊಠಡಿಯಿಂದ ಹೊರಬಾರದೆ ಇದ್ದಾಗ ಅನುಮಾನದಿಂದ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನ ಸ್ಥಳ್ಕಕೆ ಆಗಮಿಸಿದ ಬೆಳ್ತಂಗಡಿ ಸಬ್‌ಇನ್‌ಸ್ಪೆಕ್ಟರ್‌ ಆನಂದ್‌ ಮತ್ತು ತಂಡ ರೂಮಿನ ಬಾಗಿಲು ಮುರಿದು ಒಳಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಪೊಲೀಸ್‌ ಪರಿಶೀಲನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್‌ ಮನೆಯ ವಿಳಾಸ ಪತ್ತೆಯಾಗಿದ್ದು, ಮನೆಯವರನ್ನು ಸಂಪರ್ಕಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next