Advertisement

ಕಲಬುರಗಿ: 12 ಅಡಿ ಉದ್ದದ ಬೃಹತ್ ಹೆಬ್ಬಾವು ರಕ್ಷಣೆ ಮಾಡಿದ ಉರಗ ತಜ್ಞ ಪ್ರಶಾಂತ

09:35 PM Jun 27, 2021 | Team Udayavani |

ಕಲಬುರಗಿ: ತಾಲೂಕಿನ ಬೋಳೆವಾಡ ಗ್ರಾಮದ ಸೇತುವೆ ಬದಿಯ ಪೊದೆಯಲ್ಲಿ ಅರಿತುಕೊಂಡಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ತಜ್ಞ ಪ್ರಶಾಂತ ಪಾಟೀಲ್ ಯಶಸ್ವಿಯಾಗಿ ರಕ್ಷಿಸುವ ಗ್ರಾಮಸ್ಥರು ಆತಂಕವನ್ನು ದೂರ ಮಾಡಿದ್ದಾರೆ.

Advertisement

19 ಕೆಜಿ ತೂಕ, 12 ಅಡಿ ಉದ್ದದ ಹೆಬ್ಬಾವು ಮೊಲ ತಿಂದು ಸೇತುವೆ ಪಕ್ಕದ ಪೊದೆಯಲ್ಲಿ ಸೇರಿಕೊಂಡಿತ್ತು. ಈ ಮಾರ್ಗದಲ್ಲಿ ಹೊಲಗಳಿಗೆ ಹೋಗುತ್ತಿದ್ದ ಮಹಿಳೆಯರ ಕಣ್ಣಿಗೆ ಈ ಹಾವು ಬಿದ್ದಿತ್ತು.

ಈ ವಿಷಯ ತಿಳಿದು ಇಡೀ ಗ್ರಾಮಸ್ಥರು ಸ್ಥಳದಲ್ಲಿ ಜಮಾವಣೆಗೊಂಡಿದ್ದರು. ನಂತರ ಉರಗ ತಜ್ಞ ಪ್ರಶಾಂತ ಪಾಟೀಲ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಧಾವಿಸಿದ ಪ್ರಶಾಂತ ಕಾರ್ಯಾಚರಣೆ ನಡೆಸಿ ಅರ್ಧ ಗಂಟೆಯೊಳಗೆ ಹೆಬ್ಬಾವು ಸೆರೆ ಹಿಡಿಯವಲ್ಲಿ ಯಶಸ್ವಿಯಾಗಿದ್ದಾರೆ. ಸೇತುವೆಯ ಮಣ್ಣು ಮತ್ತು ಪೊದೆಯಲ್ಲಿ ಹಾವು ಸಿಲುಕಿಕೊಂಡಿದ್ದರಿಂದ ಜೆಸಿಬಿ ಸಹಾಯದಿಂದ ಗುಂಡಿ ತೋಡಿ ಅದನ್ನು ರಕ್ಷಣೆ ಮಾಡಲಾಗಿದೆ.

Advertisement

ನಂತರ ಅರಣ್ಯ ಅಧಿಕಾರಿಗಳ ಸಲಹೆ ಮೇರೆಗೆ ಸೆರೆಹಿಡಿದ ಹೆಬ್ಬಾವನ್ನು ನಗರದ ಪ್ರಾಣಿ ಸಂಗ್ರಹಾಲಯಕ್ಕೆ ತಂದು ಉರಗ ತಜ್ಞ ಪ್ರಶಾಂತ ಬಿಟ್ಟಿದ್ದಾರೆ. ಪ್ರಶಾಂತ ಅವರ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇನ್ನು, ಈ ಹೆಬ್ಬಾವು ಮಾನವನಿಗೆ ಅಪಾಯಕಾರಿ ಅಲ್ಲ. ಜತೆಗೆ ಇದು ವಿಷಕಾರಿಯೂ ಅಲ್ಲ. ಇದೊಂದು ವಿಷ ರಹಿತ ಹೆಬ್ಬಾವು ಎಂದು ಉರಗ ತಜ್ಞ ಪ್ರಶಾಂತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next