Advertisement

ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ, ಲಕ್ಷ ರೂ. ದಂಡ

10:31 PM Jan 12, 2020 | Lakshmi GovindaRaj |

ಚಿತ್ರದುರ್ಗ: ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಅಪರಾ ಧಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸಿದ್ದೇಶ ಶಿಕ್ಷೆಗೊಳಗಾದ ಆರೋಪಿ. 2017, ಅ.7ರಂದು ಹಿರಿಯೂರು ತಾಲೂಕು ಹಾಲುಮಾದೇನಹಳ್ಳಿಯ ಹುಳುವಿನಾಳ್‌ ಅರಣ್ಯ ಪ್ರದೇಶದಲ್ಲಿ ಮಹಿಳೆಯನ್ನು ಬಲವಂತವಾಗಿ ಎಳೆದೊಯ್ದು ಹೀನಕೃತ್ಯ ಎಸಗಿದ್ದ ಈತ ಬಂಗಾರದ ಆಭರಣಗಳಿಗಾಗಿ ಈ ಕೊಲೆ ನಡೆದಿದೆ ಎಂಬಂತೆ ಬಿಂಬಿಸಲು ಕಿವಿಯಲ್ಲಿದ್ದ ಓಲೆ ಗಳನ್ನು ತೆಗೆದು ಬೇರೆಡೆ ಎಸೆದಿದ್ದ.

Advertisement

ಈ ಕುರಿತು ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ಎಸ್‌.ವೈ.ವಟವಟಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿದ್ದೇಶನಿಗೆ 10 ವರ್ಷ ಕಠಿಣ ಸಜೆ, 50 ಸಾವಿರ ರೂ. ದಂಡ ಹಾಗೂ ಕೊಲೆ ಪ್ರಕರಣಕ್ಕೆ ಜೀವಾವ ಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣವನ್ನು ಸಂತ್ರಸ್ತೆ ಪರಿವಾರಕ್ಕೆ ನೀಡಲು ಕೋರ್ಟ್‌ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next