Advertisement

ಸಾಂಸ್ಕೃತಿಕ ವೇದಿಕೆಗೆ ಎ.ಆರ್‌. ರೆಹಮಾನ್‌ ರಾಯಭಾರಿ

11:14 AM Jun 09, 2022 | Shreeram Nayak |

ಹೊಸದಿಲ್ಲಿ: ಕಲಾವಿದರ ನಡುವಿನ ಸಹಯೋಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯು.ಕೆ ಕೌನ್ಸಿಲ್‌ ಆರಂಭಿಸಿರುವ “ಇಂಡಿಯಾ-ಯು.ಕೆ. ಟುಗೇದರ್‌ ಸೀಸನ್‌ ಆಫ್ ಕಲ್ಚರ್‌’ಗೆ ಭಾರತದ ಪ್ರಸಿದ್ಧ ಗಾಯಕ, ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅವರನ್ನು ರಾಯಭಾರಿಯಾಗಿ ಹೆಸರಿಸಲಾಗಿದೆ.

Advertisement

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಬುಧವಾರ “ಸೀಸನ್‌ ಆಫ್ ಕಲ್ಚರ್‌’ ವೇದಿಕೆಯನ್ನು ಆರಂಭಿಸಲಾಗಿದೆ. ಭಾರತದ ಲ್ಲಿರುವ ಬ್ರಿಟನ್‌ನ ಉಪ ಹೈ ಕಮಿಷನರ್‌ ಜಾನ್‌ ಥಾಮಸ್‌ ಮತ್ತು ಬ್ರಿಟಿಷ್‌ ಕೌನ್ಸಿಲ್‌ ನಿರ್ದೇಶಕರಾಗಿರುವ ಬರ್ಬಾರಾ ವಿಕಾØಮ್‌ ಅವರು ವೇದಿಕೆಗೆ ಚಾಲನೆ ನೀಡಿದರು. ಈ ವಿಚಾರವಾಗಿ ಸಂತಸ ಹಂಚಿಕೊಂಡಿರುವ ರೆಹಮಾನ್‌, “ಇಂತಹ ಒಂದು ವೇದಿಕೆಗೆ ರಾಯಭಾರಿ ಆಗಿರು ವುದು ಸಂತಸ ತಂದಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next