Advertisement

ಠಾಣೆಯ ಮೇಲೆ ಗ್ರೆನೇಡ್‌ ಎಸೆದ ಉಗ್ರರು;ಪೊಲೀಸ್‌ ಅಧಿಕಾರಿ ಹುತಾತ್ಮ

12:45 PM Sep 30, 2018 | |

ಶ್ರೀನಗರ: ಭಾನುವಾರ ಶೋಪಿಯಾನ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು ಪೊಲೀಸ್‌ ಠಾಣೆಯ ಮೇಲೆ ಗ್ರೆನೇಡ್‌ ಎಸೆದ ಪರಿಣಾಮ ಓರ್ವ ಪೊಲೀಸ್‌ ಅಧಿಕಾರಿ ಹುತಾತ್ಮರಾಗಿದ್ದಾರೆ. 

Advertisement

ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿ ಗ್ರೆನೇಡ್‌ ಎಸೆದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂಧಿಸದೆ ಕೊನೆಯುಸಿರೆಳೆದಿದ್ದಾರೆ. 

ಸೇನಾ ಪಡೆಗಳು ಮತ್ತು ಪೊಲೀಸ್‌ ಪಡೆಗಳು ದಾಳಿ ನಡೆಸಿದ ಉಗ್ರರಿಗಾಗಿ ಕಾರ್ಯಾಚರಣೆ ಆರಂಭಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next