Advertisement
ನಗರದ ದುರ್ಗಾಗಣೇಶ ಚಂಡೆ ಬಳಗದ ಚಂಡೆ ವಾದನ, ಕುಂಜಾರು ಗಿರಿಶೇಖರ್ ಶೇರಿಗಾರ ಬಳಗದಿ ಂದ ಘರ್ಷಣಾ ವಾದ್ಯ, ಕಹಳೆ ಬಳಗ ಇತ್ಯಾದಿ ಮೆರವಣಿಗೆಗೆ ಸಾಥ್ ನೀಡಿದವು. ಬಾಂಧವ್ಯ ಚೆಂಡೆ ಮಹಿಳಾ ಬಳಗದ ಚೆಂಡೆ ವಾದನವು ಗಮನ ಸೆಳೆಯಿತು.
ಪಾರ್ಕಿಂಗ್ ಪ್ರದೇಶದಲ್ಲಿ ಎಲ್ಲ ಮಠಾಧೀಶರು, ಸಾಧು ಸಂತರಿಗೆ ಭಗಿನಿಯರು ಸಾಂಪ್ರದಾಯಿಕ ರೀತಿಯ ಗೌರವ ಸಲ್ಲಿಸಿದ ಬಳಿಕ ಮೆರವಣಿಗೆ ಆರಂಭಗೊಂಡಿತು. ಸಾಧುಗಳಿಗೊಂದು ಕಿಟ್
ಧರ್ಮ ಸಂಸದ್ ಸಭಾಂಗಣದಲ್ಲಿ ಎಲ್ಲ ಸಾಧುಸಂತರಿಗೆ ಕಿಟ್ ಒಂದನ್ನು ನೀಡಲಾಯಿತು. ಕೇಸರಿ ಬಟ್ಟೆಯ ಚೀಲದಲ್ಲಿ ಒಂದು ಶ್ರೀಗಂಧದ ಕೊರಡು, 300 ಗ್ರಾಂ ಏಲಕ್ಕಿ, 300 ಗ್ರಾಂ ಗೋಡಂಬಿ, ಕೃಷ್ಣನ ಮೂರ್ತಿ, ಒಂದು ಶಲ್ಯ, ಸ್ಮರಣ ಸಂಚಿಕೆಯನ್ನು ಕಿಟ್ ಒಳಗೊಂಡಿತ್ತು. ಚೀಲಕ್ಕೆ ಈ ಸಾಮಗ್ರಿಗಳನ್ನು ಪ್ರಬಂಧಕರು ಗುರುವಾರ ರಾತ್ರಿ ಹಾಕಿ ಸಿದ್ಧಪಡಿಸಿದ್ದರು.
Related Articles
Advertisement