Advertisement

ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿ ಜಾಮರ್ ಅಳವಡಿಕೆ ಸಂಬಂಧ ಗೃಹ ಸಚಿವ ನೇತೃತ್ವದಲ್ಲಿ ಸಭೆ

01:26 PM Aug 24, 2022 | Team Udayavani |

ಬೆಂಗಳೂರು; ರಾಜ್ಯದ ವಿವಿಧ ಕಾರಾಗೃಹ ಗಳಲ್ಲಿ, ಅಕ್ರಮವಾಗಿ ಮೊಬೈಲ್ ಗಳನ್ನು ಉಪಯೋಗಿಸುವುದನ್ನು ಪ್ರತಿಭಂದಿಸಲು ಅನುಕೂಲವಾಗುವಂತೆ, ಅತ್ಯಾಧುನಿಕ ಮೊಬೈಲ್ ಜಾಮರ್ ಗಳ ಅಳವಡಿಕೆ ಸಂಬಂಧ, ರಾಷ್ಟ್ರೀಯ ಸಾರ್ವಜನಿಕ ಉದ್ಯಮ ಸಂಸ್ಥೆ, ಬಿ ಇ ಎಲ್ ನ ಹಿರಿಯ ಅಧಿಕಾರಿಗಳು ಪ್ರಾತ್ಯಕ್ಷಿಕೆ ನೀಡಿದರು.

Advertisement

ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ, ಪೊಲೀಸ್ ಮಹಾ ನಿರ್ದೇಶಕ (ಕಾರಾಗೃಹ) ಶ್ರೀ ಅಲೋಕ್ ಮೋಹನ್, ಶ್ರೀಮತಿ ಮಾಲಿನಿ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ, ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಎಲೆಕ್ಟ್ರಾನಿಕ್ ಉದ್ಯಮದಲ್ಲಿ ಮೇರು ಸಂಸ್ಥೆ ಯಾಗಿರುವ, ರಾಜ್ಯದಲ್ಲಿರುವ ಎಲ್ಲಾ ಕೇಂದ್ರ ಕಾರಾಗೃಹಗಳಲ್ಲಿ ಮೊಬೈಲ್ ಜಾಮರ್ ಅಳವಡಿಸಲು ಪ್ರಸ್ತಾವನೆ ಯನ್ನು ರಾಜ್ಯ ಗೃಹ ಇಲಾಖೆಗೆ ನೀಡಿದೆ. ಬಿ ಇ ಎ ಲ್ ವತಿಯಿಂದ, ಶ್ರಿ ಗುಲ್ಶನ್ ಮಂಡ್ಲೇ ಮತ್ತು ರಾಧೇ ಶ್ಯಾಮ್ ಕುಮವಾಟ್ ಅವರು, ಸಚಿವರಿಗೆ ಯೋಜನೆಯ ಬಗ್ಗೆ ವಿವರಣೆ ನೀಡಿದರು.

ಬಿಹಾರ, ಜಾರ್ಖಂಡ್ ಹಾಗೂ ಇತರೆ ರಾಜ್ಯ ಗಳಿಗೆ, ಕಾರಾಗೃಹ ಗಳಲ್ಲಿ, ಜಾಮರ್ ಅಳವಡಿಕೆಗೆ, ಇಂತಹದೇ ಪ್ರಸ್ತಾವನೆ ಗಳನ್ನೂ ಸಲ್ಲಿಸಿದ್ದು, 4ಎ ಹಾಗೂ 5ಎ ತರಾಂಗಂತರ ಗಳನ್ನು ನಿರ್ಬಂಧಗೊಳಿಸುವ, ತಂತ್ರಜ್ಞಾನ ಹಾಗೂ ಮೊಬೈಲ್ ಫೋನ್ ಜಾಮರ್ ಗಳನ್ನು BEL ಸಂಸ್ಥೆ ಅಭಿವೃದ್ದಿ ಗೊಳಿಸಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next