Advertisement

AC ಸ್ಫೋಟದಿಂದ ಗಾಯಗೊಂಡಿದ್ದ ಸೂರಿಂಜೆ ಮೂಲದ ವ್ಯಕ್ತಿ ಸಾವು

12:38 AM Sep 10, 2024 | Team Udayavani |

ಮಂಗಳೂರು: ಮುಂಬಯಿಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಕೀಮಾ ಹೊಟೇಲ್‌ ಒಂದರ ಕಾರ್ಪೊರೇಟ್‌ ಕಟ್ಟಡದಲ್ಲಿ ಹೊರಾಂಗಣದ ಏರ್‌ ಕಂಡಿಷನರ್‌ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ಸೂರಿಂಜೆ ಮೂಲದ ತಾರಾನಾಥ ವಿ.ಬಂಜನ್‌ (50) ಮೃತಪಟ್ಟಿದ್ದಾರೆ.

Advertisement

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು 4 ದಿನಗಳಿಂದ ಚಿಕಿತ್ಸೆ ನಡೆಯುತ್ತಿದ್ದ ಅವರು ಸೆ.8ರಂದು ಸಾವನ್ನಪ್ಪಿದರು. ಕೆಟ್ಟು ಹೋಗಿದ್ದ ಏರ್‌ ಕಂಡಿಷನರ್‌ ಅನ್ನು ದುರಸ್ತಿ ಮಾಡುತ್ತಿದ್ದಾಗ ಘಟನೆ ನಡೆದಿದೆ.

ಜತೆ ಕೆಲಸಗಾರರಾಗಿದ್ದ ವಾಮನ ಬಂಜನ್‌ ಮತ್ತು ಸುಜಿತ್‌ ಪಾಲ್‌ ಕೂಡ ಗಾಯಗೊಂಡಿದ್ದಾರೆ.

ಹೊಟೇಲ್‌ ಮಾಲಕ ಎನ್‌.ಟಿ.ಪೂಜಾರಿ ಅವರು ಗಾಯಾಳುಗಳ ಚಿಕಿತ್ಸೆಗೆ ನೆರವಾಗಿದ್ದು, ಬಂಜನ್‌ ಅವರು ಆಸ್ಪತ್ರೆಯಲ್ಲಿದ್ದ ಸಂದರ್ಭದ ಸಂಪೂರ್ಣ ಚಿಕಿತ್ಸೆಯ 8 ಲಕ್ಷ ರೂ. ವೆಚ್ಚವನ್ನು ಭರಿಸಿದ್ದಾರೆ.

ಮೂಲತಃ ಸೂರಿಂಜೆಯವರಾದ ತಾರಾನಾಥ ವಾಮಯ ಬಂಜನ್‌ ಅವರು ಭಯಂದರ್‌ ಪೂರ್ವದ ಸಾಯಿ ಬಾಬಾ ನಗರ ಬಾಲಕೃಷ್ಣ ಅಪಾರ್ಟ್‌ಮೆಂಟ್‌ ನಿವಾಸಿಯಾಗಿದ್ದರು. ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next