Advertisement

ಸಮಸ್ಯೆಗಳ ಆಲಿಕೆಗೆ ಸೀಮಿತವಾದ ಸಭೆ

07:00 AM Oct 04, 2018 | Team Udayavani |

ರಾಮನಗರ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ರಾಮನಗರ ಉಪಚುನಾವಣೆಯ ಬಗ್ಗೆ ವಿಷಯ ಪ್ರಸ್ತಾಪವೇ ಆಗಲಿಲ್ಲ. ಕಾರ್ಯಕರ್ತರು ದೂರುಗಳಿಗೆ ಸಭೆ ಸೀಮಿತವಾಯಿತು.

Advertisement

ಕೇತಿಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಬುಧವಾರ ಚನ್ನಪಟ್ಟಣ ಮತ್ತು ರಾಮನಗರ ಕಾರ್ಯಕರ್ತರ ಸಭೆ ನಡೆಯಿತು. ರಾಮನಗರ ಉಪಚುನಾವಣೆ ಹಿನ್ನೆಲೆಯಲ್ಲೇ ಸಭೆ ಆಯೋಜಿಸಲಾಗಿದೆ ಎಂದು ಬಹುತೇಕ ಕಾರ್ಯಕರ್ತರು ಭಾವಿಸಿದ್ದರು.

ಆದರೆ, ಕುಮಾರಸ್ವಾಮಿ ಅವರೇ ಸ್ವತಃ ಇದು ಉಪಚುನಾವಣೆಗೆ ಸಂಬಂಧಿಸಿದ ಸಭೆ ಅಲ್ಲ ಎಂದು ಸ್ಪಷ್ಟ ಪಡಿಸಿದರು. ಸಮಸ್ಯೆ ಆಲಿಸಲೆಂದೇ ಕರೆದ ಸಭೆ, ಉಪಚುನಾವಣೆ ಹಿನ್ನೆಲೆಯಲ್ಲಿ ಎಂಬುದು ಮಾಧ್ಯಮಗಳ ಸೃಷ್ಟಿ ಎಂದರು. ಸರ್ಕಾರ ಬಿದ್ದೇ ಹೋಯ್ತು ಎಂದು ಕೆಲ ಮಾಧ್ಯಮಗಳು ಹೇಳಿದವು. ಆದರೆ ತಮಗೆ 5 ವರ್ಷ ಸರ್ಕಾರ ಹೇಗೆ ನಡೆಸಬೇಕು ಎಂಬುದು ಗೊತ್ತು ಎಂದರು.

ಅಧಿಕಾರಿಗಳ ಮೇಲೆ ದೂರು, ಚನ್ನಪಟ್ಟಣ ಕೆರೆಗಳಿಗೆ ನೀರು ಬಿಟ್ಟಿಲ್ಲ ಹೀಗೆ ಅನೇಕ ಸಮಸ್ಯೆಯನ್ನು ಕಾರ್ಯಕರ್ತರು ಹೇಳಿಕೊಂಡರು. ಅಗತ್ಯ ಕ್ರಮ ವಹಿಸುವುದಾಗಿ ಸಿಎಂ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next