Advertisement

Mangalavada ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎಮ್ಮೆಯನ್ನ ಕೊಂದು ತಿಂದ ಚಿರತೆ

11:28 AM Aug 12, 2024 | Team Udayavani |

ಪಾವಗಡ: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎಮ್ಮೆಯನ್ನು ಚಿರತೆ ಕೊಂದು ತಿಂದ ಘಟನೆ ಸೋಮವಾರ (ಆ.12) ಬೆಳಗಿನ ಜಾವ 3:30ರ ಆಸುಪಾಸಿನಲ್ಲಿ ನಡೆದಿದೆ.

Advertisement

ಪಾವಗಡ ತಾಲೂಕಿನ ನಿಡಗಲ್ ಹೋಬಳಿ ಮಂಗಳವಾಡ ಗ್ರಾಮದ ಅಗಸರ ತಿಮ್ಮಣ್ಣ ಎನ್ನುವರ ಜಮೀನಿನಲ್ಲಿ ಈ ಘಟನೆ ನಡೆದಿದೆ.

ಎಂದಿನಂತೆ ಭಾನುವಾರವು ಸಹ ತಮ್ಮ ಜಮೀನಿನಲ್ಲಿ ಇರುವ ಕೊಟ್ಟಿಗೆಯ ಬಳಿ ಎಮ್ಮೆಯನ್ನು ಕಟ್ಟಿ ಹಾಕಿದ ತಿಮ್ಮಣ್ಣ ಅವರೂ ಮಲಗಿದ್ದರು. ರಾತ್ರಿ ಏಕಾಏಕಿ ಚಿರತೆಯೊಂದು ದಾಳಿ ನಡೆಸಿದ್ದು ಎಮ್ಮೆಯನ್ನು ಅಟ್ಟಾಡಿಸಿಕೊಂಡು ಸಾಯಿಸಿ ಸಂಪೂರ್ಣ ಹಿಂಭಾಗವನ್ನು ತಿಂದಿದೆ.

ಕಳೆದ ಮೂರು ತಿಂಗಳ ಹಿಂದೆಯಷ್ಟೇ ಹಸುವಿನ ಕರುವೂಂದನ್ನು ಹುಣಸೆ ಮರದ ಮೇಲಕ್ಕೆ ಎಳೆದೊಯ್ದು ತಿಂದಿತ್ತು. ಅದರ ನಂತರ ಬೃಹತ್ ಎಮ್ಮೆಯ ಮೇಲೆ ಚಿರತೆ ದಾಳಿ ನಡೆಸಿರುವುದು ಈ ಭಾಗದ ರೈತರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಅಗಸರ ತಿಮ್ಮಣ್ಣ ಮನವಿ ಮಾಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next