Advertisement

Kundapur ಕೂಲಿ ಕಾರ್ಮಿಕನಿಗೆ ಚೂರಿ ಇರಿತ

12:31 AM Mar 05, 2024 | Team Udayavani |

ಕುಂದಾಪುರ:ಬಿಹಾರ ರಾಜ್ಯದ ಮೊಹಮ್ಮದ್‌ (31) ಅವರು ಕೋಟೇಶ್ವರ ಗ್ರಾಮದ ಕಾಗೇರಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಜತೆಗಾರನಿಂದಲೇ ಚೂರಿ ಇರಿತಕ್ಕೊಳಗಾಗಿದ್ದಾರೆ.

Advertisement

ಕೂಲಿ ಕಾರ್ಮಿಕರಾಗಿದ್ದ ಇವರ ಜತೆಯಲ್ಲಿ ಪಿಂಟು ಕುಮಾರ್‌ ಹಾಗೂ ಸೂರಜ್‌ ಕೂಡ ವಾಸವಿದ್ದರು. ಪಿಂಟು ಕುಮಾರ್‌ ಅಡುಗೆ ವಿಷಯದಲ್ಲಿ ತಕರಾರು ತೆಗೆದು ಚೂರಿಯಿಂದ ಎದೆಗೆ ತಿವಿದಿದ್ದು ಬೊಬ್ಬೆ ಹಾಕಿದಾಗ ಸೂರಜ್‌ ಓಡಿ ಹೋಗಿದ್ದಾನೆ.

ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next