Advertisement

Adani: ಪ.ಬಂಗಾಳದಲ್ಲಿ ಅದಾನಿಗೆ ಭಾರೀ ಹಿನ್ನಡೆ?

10:46 PM Nov 22, 2023 | Team Udayavani |

ಕೋಲ್ಕತ: ಪಶ್ಚಿಮ ಬಂಗಾಳದ ತಾಜಪುರ ಆಳಸಮುದ್ರ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅದಾನಿ ಪೋರ್ಟ್ಸ್ಗೆ ಹಸ್ತಾಂತರಿಸಲಾಗಿದ್ದ ಪ್ರಾಥಮಿಕ ಒಪ್ಪಂದ ಸಮ್ಮತಿ ಪತ್ರವನ್ನು ರದ್ದುಗೊಳಿಸಲು ಪಶ್ಚಿಮ ಬಂಗಾಳದ ಟಿಎಂಸಿ ನೇತೃತ್ವದ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

25,000 ಕೋಟಿ ರೂ.ವೆಚ್ಚದ ತಾಜಪುರ ಆಳಸಮುದ್ರ ಯೋಜನೆಗೆ ಹೊಸದಾಗಿ ಬಿಡ್‌ ಕರೆಯುವ ಟೆಂಡರ್‌ ಪ್ರಕ್ರಿಯೆಯನ್ನು ಶೀಘ್ರವಾಗಿ ಆರಂಭಿಸುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೆಂಗಾಲ್‌ ಗ್ಲೋಬಲ್‌ ಬಿಸಿನೆಸ್‌ ಶೃಂಗಸಭೆಯಲ್ಲಿ ಘೊಷಿಸಿದ್ದರು. ಈ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್ಸ್‌ಗೆ ನೀಡಿದ್ದ ಸಮ್ಮತಿ ಪತ್ರದ ಬಗ್ಗೆ ಊಹಾಪೋಹ ಸೃಷ್ಟಿಯಾಗಿತ್ತು. ಇದೀಗ ಒಪ್ಪಂದಕ್ಕೆ ಮುಂಚೆ ನೀಡಲಾಗಿದ್ದ ಆ ಪತ್ರವನ್ನೇ ರದ್ದುಗೊಳಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಒಂದು ವೇಳೆ ಇದು ಜಾರಿಯಾದರೆ ಅದಾನಿ ಸಮೂಹಕ್ಕೆ ಭಾರೀ ಹಿನ್ನಡೆಯಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next