Advertisement

Mangaluru ಕಾರಿನ ಬಾನೆಟ್‌ ಒಳಗೆ ಇತ್ತು ಬೃಹತ್‌ ಹೆಬ್ಬಾವು!

09:48 PM Aug 20, 2023 | Team Udayavani |

ಮಂಗಳೂರು: ನಗರದ ಮಣ್ಣಗುಡ್ಡೆ ವಾಲಿಬಾಲ್‌ ಮೈದಾನದ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ರವಿವಾರ ಹೆಬ್ಬಾವು ಪತ್ತೆಯಾಗಿದೆ.

Advertisement

ಕುದ್ರೋಳಿ ಕಂಬಳದ ಫ್ಯಾಟ್‌ಗೆ ಬಂದಿದ್ದ ವ್ಯಕ್ತಿಯೊಬ್ಬರು ಅಲ್ಲಿಂದ ತಮ್ಮ ಕಾರಿನಲ್ಲಿ ವಾಪಸ್‌ ತೆರಳುತ್ತಿದ್ದಾಗ ಮಣ್ಣಗುಡ್ಡೆ ಬಳಿ ಎಂಜಿನ್‌ ಬಂದ್‌ ಬಿದ್ದಿದೆ.

ಎಷ್ಟೇ ಪ್ರಯತ್ನಿಸಿದರೂ ಕಾರು ಸ್ಟಾರ್ಟ್‌ ಆಗಿಲ್ಲ. ಬಳಿಕ ಕಾರು ಮಾಲಕ ಮೆಕ್ಯಾನಿಕ್‌ ಕರೆಸಿದ್ದು, ಆತ ಬಾನೆಟ್‌ ತೆರೆದು ನೋಡಿದಾಗ ಅದರಲ್ಲಿ ಬೃಹತ್‌ ಗಾತ್ರದ ಹೆಬ್ಬಾವು ಮಲಗಿರುವುದು ಕಂಡು ಬಂದಿದೆ. ಬಳಿಕ ಸ್ಥಳೀಯರ ಜತೆ ಸೇರಿ ಹೆಬ್ಬಾವನ್ನು ಬಾನೆಟ್‌ನಿಂದ ಹೊರ ತೆಗೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next