Advertisement

Chennai: ಚೈನಿಂದ ಬಿಗಿದು, ಕತ್ತರಿಸಿ, ಬೆಂಕಿ ಹಚ್ಚಿ ಪ್ರೇಯಸಿಯ ಭೀಕರ ಕೊಲೆ

11:26 PM Dec 25, 2023 | Team Udayavani |

ಚೆನ್ನೈ: ಜನ್ಮದಿನದ ಹಿಂದಿನ ದಿನದಂದು 24 ವರ್ಷದ ಮಹಿಳಾ ಐಟಿ ಉದ್ಯೋಗಿಯೊ ಬ್ಬರನ್ನು, ಮಾಜಿ ಸಹಪಾಠಿಯೊಬ್ಬ ಬ್ಲೇಡ್‌ನಿಂದ ಕತ್ತರಿಸಿ, ಪೆಟ್ರೋಲ್‌ನಿಂದ ಬೆಂಕಿಹಚ್ಚಿ ಬರ್ಬರ ವಾಗಿ ಹತ್ಯೆ ಮಾಡಲಾಗಿದೆ. ಈ ಭೀಕರ ಘಟನೆ ನಡೆದಿದ್ದು ತಮಿಳುನಾಡಿನ ಚೆನ್ನೈಯ ದಕ್ಷಿಣ ಉಪನಗರ ಕೆಳಂಬಕ್ಕಂ ಬಳಿಯ ತಲಂಬೂರ್‌ನಲ್ಲಿ. ಮೃತ ಯುವತಿಯನ್ನು ನಂದಿನಿ ಎಂದು ಗುರುತಿ ಸಲಾಗಿದೆ. ಈಕೆಯನ್ನು ಮದುವೆಯಾ ಗಲೆಂದೇ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದ, ಹಿಂದಿನ ಪಾಂಡಿ ಮಹೇಶ್ವರಿ, ಈಗಿನ ವೆಟ್ರಿ ಮಾರನ್‌(26) ಕೊಲೆ ಆರೋಪಿ. ವೇಟ್ರಿಯನ್ನು ಮದುವೆ ಯಾಗಲು ಸಾಧ್ಯವಿಲ್ಲ ಎಂದಿದ್ದೇ ಹತ್ಯೆಗೆ ಕಾರಣವಿರಬಹುದೆಂದು ಶಂಕಿಸಲಾಗಿದೆ.

Advertisement

ಮಧುರೈ ಮೂಲದ ಸಾಫ್ಟ್ವೇರ್‌ ಎಂಜಿನಿಯರ್‌ ನಂದಿನಿ, ಚೆನ್ನೈಯಲ್ಲಿ ಕೆಲಸದ ಸಲುವಾಗಿ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರು. ಮಧುರೈನಲ್ಲಿ ಪಾಂಡಿ ಮಹೇಶ್ವರಿ ಮತ್ತು ನಂದಿನಿ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ್ದರು. ಈ ನಡುವೆ ಪಾಂಡಿ ಮಹೇಶ್ವರಿ ಲಿಂಗ ಪರಿವರ್ತನೆ ಚಿಕಿತ್ಸೆಗೆ ಒಳಗಾಗಿದ್ದು, ವೆಟ್ರಿಮಾರನ್‌ ಎಂದು ಹೆಸರು ಬದಲಿಸಿ ಕೊಂಡಿದ್ದಳು. ಆದರೂ ಇಬ್ಬರ ನಡುವೆ ಸ್ನೇಹ ಮುಂದುವರಿದಿತ್ತು.

ನಂದಿನಿಯ ಹುಟ್ಟುಹಬ್ಬದ ಆಚರಣೆ ನಿಮಿತ್ತ ಆಕೆಯನ್ನು ರವಿವಾರ ಸಂಜೆ ವೆಟ್ರಿಮಾರನ್‌ ಕರೆಸಿಕೊಂಡಿದ್ದಾನೆ. ಅನಂತರ ಸಪ್ರೈಸ್‌ ನೀಡುವ ನೆಪದಲ್ಲಿ ಆಕೆಯ ಕಣ್ಣುಗಳನ್ನು ಬಟ್ಟೆಯಿಂದ ಕಟ್ಟಿ, ಚೈನ್‌ಗಳಿಂದ ಕೈ-ಕಾಲು ಕಟ್ಟಿ ಹಾಕಿದ್ದಾನೆ. ಅನಂತರ ಬ್ಲೇಡ್‌ನಿಂದ ಕುಯ್ದು ಹಿಂಸಿಸಿ, ಜೀವಂ ತವಾಗಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕ್ರೂರ ವಾಗಿ ಕೊಲೆ ಮಾಡಿದ್ದಾನೆ. ಪೊಲೀಸರು ಕ್ಷಿಪ್ರವಾಗಿ ಆರೋಪಿ ವೇಟ್ರಿಮಾರನ್‌ನನ್ನು ಬಂಧಿಸಿದ್ದಾರೆ ಮತ್ತು ಸದ್ಯ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next