Advertisement

ಫುಟ್‌ಬಾಲ್‌ ಮೈದಾನಕ್ಕಿಲ್ಲ ಟರ್ಫ್‌ ಭಾಗ್ಯ; ಇನ್ನೂ ನನಸಾಗದ ಕ್ರೀಡಾಳುಗಳ ಕನಸು

03:20 PM Oct 19, 2022 | Team Udayavani |

ಮಹಾನಗರ: ನಗರದಲ್ಲಿ ಸುಸಜ್ಜಿತ ಟರ್ಫ್‌ ಫುಟ್‌ಬಾಲ್‌ ಮೈದಾನ ನಿರ್ಮಾಣವಾಗಲಿದೆ ಎನ್ನುವ ಫುಟ್‌ ಬಾಲ್‌ ಪ್ರೇಮಿಗಳ ಕನಸು ಸದ್ಯಕ್ಕೆ ನನಸಾಗುವಂತೆ ಕಾಣುತ್ತಿಲ್ಲ.

Advertisement

ಅಭಯಚಂದ್ರ ಅವರು ಕ್ರೀಡಾ ಸಚಿವರಾಗಿದ್ದಾಗ ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಶನ್‌ ಮನವಿ ಮೇರೆಗೆ ಫುಟ್‌ಬಾಲ್‌ ಮೈದಾನಕ್ಕೆ ಟರ್ಫ್‌ ಅಳವಡಿಕೆ ಸಂಬಂಧಿಸಿ 1 ಕೋಟಿ ರೂ. ಮಂಜೂರು ಆಗಿತ್ತು. ಆಗ ಕ್ರೀಡಾ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯ ಉಸ್ತುವಾರಿ ವಹಿಸಲಾಗಿತ್ತು. ಅದರಂತೆ ಟೆಂಡರ್‌ ಕರೆಯ ಲಾಗಿತ್ತಾದರೂ, ಅಷ್ಟು ಮೊತ್ತಕ್ಕೆ ಟೆಂಡರ್‌ ಆಗಿಲ್ಲ. ಬಿಡ್ಡುದಾರರು ಶೇ.25ಕ್ಕಿಂತ ಹೆಚ್ಚಿನ ಮೊತ್ತವನ್ನೇ ನಮೂದಿಸಿದ್ದರು.

ಅನಂತರದಲ್ಲಿ ಇಲಾಖೆ ಮತ್ತೂಮ್ಮೆ ಅಂದಾಜು ಪಟ್ಟಿ ಸಿದ್ಧಪಡಿಸಿ, 25 ಲಕ್ಷ ರೂ. ಹೆಚ್ಚಿಸಿ ಕ್ರೀಡಾ ಇಲಾಖೆಗೆ ಲೋಕೋ ಪಯೋಗಿ ಇಲಾಖೆಗೆ ಎಂಜಿನಿಯರ್‌ಗಳು ಪತ್ರ ಬರೆದರು. ಇಲಾಖಾ ನಿರ್ದೇಶಕರಿಗೆ ಮೊತ್ತ ಹೆಚ್ಚು ಮಾಡುವ ಅಧಿಕಾರ ಇಲ್ಲದ ಕಾರಣ, ಅದನ್ನು ಕಾರ್ಯದರ್ಶಿಯವರಿಗೆ ಕಳುಹಿಸಲಾಯಿತು. ಬಳಿಕ ಸಾಕಷ್ಟು ಪತ್ರವ್ಯವಹಾರಗಳು ನಡೆದು, ಕೊನೆಗೆ ಅಂತಹ ಪ್ರಸ್ತಾವನೆಯೇ ಬೇಡವೆಂದು ತೀರ್ಮಾನಿಸಿ, ನಿರ್ಮಿತಿ ಕೇಂದ್ರ ಮೂಲಕವೇ 1 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ನಿರ್ದೇಶಕರು ಸೂಚಿಸಿದರು. ಅದರಂತೆ ಪಿಡಬ್ಲ್ಯುಡಿ ಸರಕಾರದಿಂದ ಬಿಡುಗಡೆಯಾಗಿದ್ದ ಮೊದಲ ಕಂತು 25 ಲಕ್ಷ ರೂ. ಅನು ದಾನವನ್ನು ನಿರ್ಮಿತಿ ಕೇಂದ್ರಕ್ಕೆ ವರ್ಗಾಯಿಸಲಾಯಿತು. ಇಷ್ಟು ಪ್ರಕ್ರಿಯೆಗಳು ನಡೆಯುವಾಗ ಸರಕಾರಗಳು ಬದಲಾಯಿತು. ಹೀಗಾಗಿ ಟರ್ಫ್‌ ಅಳ ವಡಿಸುವ ಮೂಲಕ ಉದ್ದೇಶವೇ ಬದಿಗೆ ಸರಿದಂತಾಗಿದೆ.

ಪರ್ಯಾಯ ಕಾಮಗಾರಿಗೆ ಮಂಜೂರಾತಿ

ಒಂದು ಕೋಟಿ ರೂ. ವೆಚ್ಚದ ಒಂದು ಕಾಮ ಗಾರಿಯ ಬದಲು ಆ ಮೊತ್ತ ವನ್ನು ಪರ್ಯಾಯ ಕಾಮಗಾರಿಗೆ ಬಳಕೆ ಮಾಡಿದರೆ ಉತ್ತಮ ಎನ್ನುವ ಶಾಸಕರ ನಿಲುವಿನಂತೆ, 35 ಲಕ್ಷ ರೂ. ಮೊತ್ತ ವನ್ನು ಫುಟ್‌ಬಾಲ್‌ ಮೈದಾನ ಅಭಿ ವೃದ್ಧಿಗೆ ಮೀಸಲಿಡಲಾಯಿತು. ಉಳಿದ ಮೊತ್ತವನ್ನು ಪರ್ಯಾಯ 3 ಕಾಮ ಗಾರಿಗಳಿಗೆ (ಮಂಗಳಾ ಸ್ಟೇಡಿಯಂ ಬಳಿಯ ಸ್ಕೇಟಿಂಗ್‌ ಅಂಕಣ, ಉರ್ವ ಮಂಗಳಾ ಫ್ರೆಂಡ್ಸ್‌ ಸರ್ಕಲ್‌ನ ಕ್ರೀಡಾ ಇಲಾಖೆಯ ಮೈದಾನ ಅಭಿವೃದ್ಧಿ ಮತ್ತು ಉರ್ವ ಮೈದಾನ ಅಭಿವೃದ್ಧಿ ಕಾಮಗಾರಿ) ಗಾಗಿ ಸ್ಟೇಡಿಯಂ ಕಮಿಟಿ ಮೂಲಕ ಚೇಂಜ್‌ ಆಫ್‌ ವರ್ಕ್‌ ಮಾಡಿಸಿ, ಇಲಾ ಖೆಗೆ ಇನ್ನೊಂದು ಪ್ರಸ್ತಾವನೆ ಕಳುಹಿಸಲಾ ಯಿತು. ಬದಲಿ ಕಾಮಗಾರಿಗೆ ಇಲಾ ಖೆಯಿಂದ ಮಂಜೂರಾತಿ ಬಂದಿದೆ. ಆ ಮೂಲಕ ಕೋಟಿ ರೂ. ವೆಚ್ಚದ ಸುಸಜ್ಜಿತ ಟರ್ಫ್‌ ಕ್ರೀಡಾಂಗಣ ಸದ್ಯಕ್ಕೆ ನಿರ್ಮಾಣವಾಗದು.

Advertisement

ನಿರ್ಮಿತಿ ಕೇಂದ್ರಕ್ಕೆ ವಹಿಸಬೇಕಿತ್ತು: ಅಭಯಚಂದ್ರ ಅವರು ಕ್ರೀಡಾ ಸಚಿವರಾಗಿದ್ದಾಗ ಫುಟ್‌ಬಾಲ್‌ ಮೈದಾನಕ್ಕೆ ಟರ್ಫ್‌ ಸಹಿತ ಅಭಿವೃದ್ಧಿಗೆಂದು 1 ಕೋಟಿ ರೂ. ಬಿಡುಗಡೆ ಮಾಡಿದ್ದರು. ಪಿಡಬ್ಲ್ಯುಡಿಗೆ ವಹಿಸಿ ಟೆಂಡರ್‌ ಮೊದಲಾದ ಕಾರಣಕ್ಕೆ ವಿಳಂಬವಾಯಿತು. ಆಗಲೇ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ವಹಿಸಿದ್ದರೆ ಇಷ್ಟೊತ್ತಿಗಾಗಲೇ ಸುಸಜ್ಜಿತ ಮೈದಾನ ನಿರ್ಮಾಣವಾಗುತ್ತಿತ್ತು. ಸದ್ಯ ಟರ್ಫ್‌ ಮೈದಾನ ನಿರ್ಮಿಸುವಷ್ಟು ಅನುದಾನವೂ ಇಲ್ಲ. ಕ್ರೀಡಾ ಇಲಾಖೆ ಟರ್ಫ್‌ ಕ್ರೀಡಾಂಗಣ ನಿರ್ಮಿಸುವತ್ತ ಮತ್ತೂಮ್ಮೆ ಚಿಂತನೆ ನಡೆಸಬೇಕು. – ಡಿ.ಎಂ. ಅಸ್ಲಾಂ, ದ.ಕ ಜಿಲ್ಲಾ ಫುಟ್ಬಾಲ್‌ ಅಸೋಸಿಯೇಶನ್‌ ಅಧ್ಯಕ್ಷ

ಶೀಘ್ರ ಶಿಲಾನ್ಯಾಸ: ಟರ್ಫ್‌ ಕ್ರೀಡಾಂಗಣ ಮಾಡಿದರೆ, ಫುಟ್‌ಬಾಲ್‌ ಹೊರತು ಪಡಿಸಿ ಬೇರೆ ಚಟುವಟಿಕೆಗಳಿಗೆ ಉಪಯೋಗಿಸಲು ಸಾಧ್ಯವಿಲ್ಲ. ಆದ್ದರಿಂದ 35 ಲಕ್ಷ ರೂ. ವೆಚ್ಚದಲ್ಲಿ ಫುಟ್‌ಬಾಲ್‌ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಸ್ಥಳೀಯ ಪಾಲಿಕೆ ಸದಸ್ಯರು, ಫುಟ್‌ಬಾಲ್‌ ಅಸೋಸಿಯೇಶನ್‌ ಪ್ರಮುಖರು, ಎಂಜಿನಿಯರ್‌ಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಯಾವ ರೀತಿ ಅಭಿವೃದ್ಧಿ ಪಡಿಸಬೇಕು ಎಂದು ನಿರ್ಧರಿಸಿದ್ದಾರೆ. ಶೀಘ್ರ ಶಿಲಾನ್ಯಾಸ ನೆರವೇರಿಸಲಾಗುವುದು. – ವೇದವ್ಯಾಸ ಕಾಮತ್‌, ಶಾಸಕರು     

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next