Advertisement

ಕತ್ತು ಹಿಸುಕಿ ಹೆತ್ತ ಮಗು ಕೊಂದ ಕಟುಕ ತಂದೆ

11:07 PM Jun 19, 2019 | Lakshmi GovindaRaj |

ಚಿಕ್ಕಮಗಳೂರು: ಹೆಣ್ಣು ಮಗು ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ, ಜಮೀನಿನಲ್ಲಿ ಹೂತು ಹಾಕಿದ್ದ ಅಮಾನವೀಯ ಘಟನೆ ತಾಲೂಕಿನ ಬೂಚೇನಹಳ್ಳಿ ಕಾವಲ್‌ ಗ್ರಾಮದಲ್ಲಿ ನಡೆದಿದೆ.

Advertisement

ಹಾಸನ ಜಿಲ್ಲೆ ಬೇಲೂರು ತಾಲೂಕು ನರಸೀಪುರ ಗ್ರಾಮದ ಮಂಜುನಾಥ್‌ (24) ಸದ್ಯ ಪೊಲೀಸರ ವಶದಲ್ಲಿದ್ದು, ಹೂಳಲಾಗಿದ್ದ ಮಗುವಿನ ಶವ ಹೊರತೆಗೆದು ಪರಿಶೀಲಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಬೂಚೇನಹಳ್ಳಿ ಕಾವಲ್‌ನ ಸುಪ್ರಿತಾ ಅವರ ವಿವಾಹ ಮಂಜುನಾಥನ ಜತೆ ಒಂದೂವರೆ ವರ್ಷದ ಹಿಂದೆ ನಡೆದಿತ್ತು. 40 ದಿನದ ಹಿಂದೆ ಈ ದಂಪತಿಗೆ ಹೆಣ್ಣು ಮಗು ಜನಿಸಿದೆ. ಹೆಣ್ಣು ಮಗು ಹುಟ್ಟಿದ್ದಕ್ಕೆ ಮಂಜುನಾಥ ತೀವ್ರ ಬೇಸರಗೊಂಡಿದ್ದ ಎನ್ನಲಾಗಿದೆ.

ಈ ಬಗ್ಗೆ ಪತ್ನಿ ಜತೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಈ ಮಧ್ಯೆ, ಹೆರಿಗೆ ನಂತರ ತವರು ಮನೆಯಲ್ಲಿದ್ದ ಪತ್ನಿ ಸುಪ್ರಿತಾರನ್ನು ನೋಡಲು ಮಂಗಳವಾರ ಆಗಮಿಸಿದ್ದ ಮಂಜುನಾಥ್‌, ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಸುಗೂಸಿನ ಕತ್ತು ಹಿಸುಕಿ ಕೊಲೆ ಮಾಡಿ, ಮಗುವನ್ನು ಸುಪ್ರಿತಾ ಅವರ ತಂದೆಯ ಜಮೀನಿಗೆ ಕೊಂಡೊಯ್ದು ಧಪನ್‌ ಮಾಡಿದ್ದ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next