Advertisement

ಪ್ರಧಾನಿ ಭೇಟಿಗೆ ಹೊರಟ ಪಿ.ವೈ. ಹುಣಶ್ಯಾಳ ರೈತ

08:07 AM Jun 25, 2019 | Suhan S |

ಬೆಳಗಾವಿ: ದೇಶದಲ್ಲಿ ಮತ್ತೂಮ್ಮೆ ನೋಟು ಹಾಗೂ ಸಾರಾಯಿ ಬ್ಯಾನ್‌ ಮಾಡಬೇಕು ಎಂದು ಆಗ್ರಹಿಸಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಬೆಳಗಾವಿಯ ರೈತನೋರ್ವ ದೆಹಲಿಗೆ ಹೊರಟಿದ್ದಾನೆ.

Advertisement

ಗೋಕಾಕ ತಾಲೂಕಿನ ಪಿ.ವೈ. ಹುಣಶ್ಯಾಳ ಗ್ರಾಮದ ನಾರಾಯಣ ಬಸಪ್ಪ ಚೆನ್ನಾಳ ಎಂಬ ರೈತ ಮೋದಿಯನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದಾನೆ. ಘಟಪ್ರಭಾದಿಂದ ನೇರವಾಗಿದ ದೆಹಲಿಗೆ ರೈಲು ಮೂಲಕ ತೆರಳಿ ದೇಶದಲ್ಲಿ ಪ್ರಧಾನಿ ಮೋದಿ ಅವರ ನೀತಿ ಬೆಂಬಲಿಸಲಿದ್ದು, ಬಳಿಕ ರೈತರ ಬಗ್ಗೆ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಿದ್ದಾನೆ.

2016ರಲ್ಲಿ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಲಾಗಿತ್ತು. ಅದರಂತೆ ಈಗ 2016ರಿಂದ ಜಮಾ ಆಗಿರುವ ನೋಟುಗಳನ್ನು ಮತ್ತೆ ಬ್ಯಾನ್‌ ಮಾಡಿದರೆ ಭ್ರಷ್ಟಾಚಾರಿಗಳಿಗೆ ಪಾಠ ಕಲಿಸಿದಂತಾಗುತ್ತದೆ. ಜ‌ನಪ್ರತಿನಿಧಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಬಳಿ ಕೋಟ್ಯಂತರ ರೂ. ಕಪ್ಪು ಹಣ ಇದ್ದು, ಅದನ್ನು ಹೊರಗೆ ತೆಗೆಯಬೇಕಾದರೆ ನೋಟು ಬ್ಯಾನ್‌ ಮಾಡಬೇಕು ಎಂದು ಆಗ್ರಹಿಸಲಾಗುವುದು ಎನ್ನುತ್ತಾರೆ ರೈತ ನಾರಾಯಣ. ಈಗಾಗಲೇ ನಮ್ಮ ಭಾಗದಲ್ಲಿ ರೈಲ್ವೆ ಡಬ್ಲಿಂಗ್‌ ಕಾರ್ಯ ನಡೆದಿದ್ದು, ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ಈ ಕಾರ್ಯ ಮುಗಿಸಲಿದ್ದಾರೆ. ಡಬ್ಲಿಂಗ್‌ ಕಾರ್ಯಕ್ಕೆ ಅಗತ್ಯ ಇರುವ ಜಮೀನು ಸ್ವಾಧೀನ ಪಡಿಸಿಕೊಂಡರೆ ರೈತರಿಗೆ ಪರಿಹಾರ ಧನ ವಿತರಿಸಿದ ಬಳಿಕವೇ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next