Advertisement

ರೈತ ಕುಟುಂಬ ದತ್ತು ಪಡೆದ ಎಂಎಲ್ಸಿ

02:51 PM Apr 19, 2020 | Suhan S |

ಚನ್ನರಾಯಪಟ್ಟಣ: ಸಂಕಷ್ಟಕ್ಕೆ ಸಿಲುಕಿದ ರೈತನ ಕುಟುಂಬವನ್ನು ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ದತ್ತು ತೆಗೆದುಕೊಂಡು ಮಾನವೀಯತೆ ಮೆರೆದಿದ್ದಾರೆ.

Advertisement

ಚನ್ನರಾಯಪಟ್ಟಣ ತಾಲೂಕಿನ ದಡದಹಳ್ಳಿ ಗ್ರಾಮದ ರೈತ ನಂಜೇಗೌಡರ ಪುತ್ರ ಸಂತೋಷ್‌ ಕುರಿ, ಮೇಕೆ, ಖರೀದಿಸಲು ಹೋಗಿ ಲಾಕ್‌ಡೌನ್‌ನಿಂದ ಗ್ರಾಮಕ್ಕೆ ಹಿಂತಿರುಗಲು ಸಾಧ್ಯವಾಗಿಲ್ಲ. ಗ್ರಾಮದಲ್ಲಿ ಇರುವ ಕುರಿ ಮೇಕೆಗೆ ಮೇವಿನ ಕೊರತೆ ಇದ್ದರಿಂದ ಎಂ.ಎ. ಗೋಪಾಲಸ್ವಾಮಿ ಅವರು, ನಂಜೇಗೌಡ ಅವರ ಕುರಿ ಮೇಕೆಗಳಿಗೆ ಒಂದು ಟ್ರ್ಯಾಕ್ಟರ್‌ ಜೋಳದ ಮೇವು ಒದಗಿಸಿದ್ದಾರೆ.

ಸಂತೋಷ್‌ ಗ್ರಾಮಕ್ಕೆ ಹಿಂತಿರುಗುವವರೆಗೆ ಕುರಿ ಮೇಕೆ ಮೇವಿನ ಜವಾಬ್ದಾರಿಯನ್ನು ವಿಧಾನ ಪರಿಷತ್‌ ಸದಸ್ಯರಾದ ಎಂ.ಎ.ಗೋಪಾಲಸ್ವಾಮಿ ವಹಿಸಿಕೊಂಡಿದ್ದು ಅವರ ಕುಟುಂಬವನ್ನು ದತ್ತು ತೆಗೆದುಕೊಂಡಿದ್ದಾರೆ. ಶಾಸಕರು ನಂಜೇಗೌಡರ ಜಮೀನನ್ನು ಸ್ವತಃ ನೇಗಿಲು ಹಿಡಿದು ಮೇವಿನ ಬಿತ್ತನೆ ಮಾಡುವ ಮೂಲಕ ಧೈರ್ಯ ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next