Advertisement
ಮೇ 29ಕ್ಕೆ ನಗರದಲ್ಲಿ ಭಾರೀ ಮಳೆ ಸುರಿದಾಗ ಯಾವುದೋ ಮನೆಯಿಂದ ನಾಯಿಯೊಂದು ದಾರಿ ಕಾಣದೆ ಮಲ್ಲಿಕಟ್ಟೆ ವ್ಯಾಪ್ತಿಯಲ್ಲಿ ಸುತ್ತಾಡುತ್ತಿತ್ತು. ಸಾಕು ನಾಯಿಯಂತೆ ಗೋಚರಿಸುತ್ತಿದ್ದ ಅದು ಅಂತಿಮವಾಗಿ ಸಾಯಿರಾಧಾ ವಾಹನ ಶೋರೂಂ ಪಕ್ಕದ ಅಂಗಡಿ/ಮನೆಯ ಬಳಿ ಕುಳಿತಿತ್ತು. ಒಂದೆರಡು ದಿನ ಸ್ಥಳೀಯರು ಆ ನಾಯಿಗೆ ಆಹಾರ ನೀಡಿ ಉಪಚರಿಸಿದರು. ಮರುದಿನ ನಾಯಿ ಶೋರೂಂ ಬಳಿ ಸ್ಥಳಾಂತರಗೊಂಡಿತು. ಕಾವಲುಗಾರ ಆಹಾರ ನೀಡಿದ ಮೇಲೆ ನಾಯಿ ಅಲ್ಲಿಂದ ಕದಲಲಿಲ್ಲ. ಸಂಸ್ಥೆಯ ಸಿಬಂದಿಯೂ ತಿಂಡಿ ನೀಡಿದರು. ಹೀಗೇ ಒಂದು ವಾರ ಕಳೆಯಿತು.
ನಾಯಿಯ ಅಸಹಾಯಕತೆ ಕಂಡ ಶೋರೂಂ ಸಿಬಂದಿ “ನಾಯಿ ಒಂದು ಬಂದಿದೆ. ಮನೆಯವರ ಹುಡುಕಾಟದಲ್ಲಿದೆ’ ಎಂಬ ಸಚಿತ್ರ ಸಂದೇಶವನ್ನು ವಾಟ್ಸಾಪ್ನಲ್ಲಿ ರವಾನಿಸಿದರು. ಆ ಮೆಸೇಜ್ ಬೇರೆ ಬೇರೆ ಗ್ರೂಪ್ಗ್ಳಲ್ಲಿ ಹರಿದಾಡಿತು. ಮರುದಿನ ಬೆಳಗ್ಗೆ ಹಲವು ಶ್ವಾನಪ್ರಿಯರು ಬಂದು ನಾಯಿ ಬಗ್ಗೆ ವಿಚಾರಿಸಿದರು. 10-15 ಮಂದಿ ಶೋರೂಂಗೆ ಬಂದು ನಾಯಿಯನ್ನು ವೀಕ್ಷಿಸಿದರು. ಅದರಲ್ಲಿ ಮಲ್ಲಿಕಟ್ಟೆಯ ಲೋಬೋ ಲೈನ್ ನಿವಾಸಿಯೊಬ್ಬರು, “ನಾಯಿಯನ್ನು ರಸ್ತೆ ಬದಿ ಬಿಡುವ ಬದಲು ಸಾಕುತ್ತೇನೆ’ ಎಂದು ಮನೆಗೆ ಕರೆದುಕೊಂಡು ಹೋದರು. ಸಂಜೆಯಾಗುವಷ್ಟರಲ್ಲಿ ಓರ್ವರು ಲೋಬೋ ಲೈನ್ ನಿವಾಸಿಗೆ ಕರೆ ಮಾಡಿ, “ನಾಯಿಗೆ ಒಂದೆರಡು ದಿನ ನಾವೂ ಊಟ ನೀಡಿದ್ದೇವೆ. ನಾವೇ ನಾಯಿಯನ್ನು ಸಾಕುತ್ತೇವೆ’ ಎಂದು ಕರೆದೊಯ್ದರು. ಅಲ್ಲಿಗೆ ನಾಯಿ ಮತ್ತೂಂದು ಮನೆಗೆ ರವಾನೆಯಾಯಿತು.
Related Articles
Advertisement