Advertisement

ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಭಕ್ತ ಕುಸಿದು ಬಿದ್ದು ಸಾವು

10:06 PM Oct 20, 2022 | Team Udayavani |

ಹಾಸನ: ಶ್ರೀ ಹಾಸನಾಂಬೆಯ ದರ್ಶನಕ್ಕೆ ಗುರುವಾರ ಭಕ್ತರ ಮಹಾಪೂರವೇ ಹರಿದು ಬಂದಿದ್ದು, ಸೂಕ್ತ ವ್ಯವಸ್ಥೆಗಳಿಲ್ಲದೆ ಭಕ್ತರು ತೀವ್ರ ಕಷ್ಟಪಡಬೇಕಾಯಿತು. ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರೊಬ್ಬರು ದೇವಾಲಯದ ಮುಂಭಾಗದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.

Advertisement

ಮಧ್ಯಾಹ್ನ 12 ಗಂಟೆ ಹೊತ್ತಿನಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದ ಹಾಸನ ತಾಲೂಕು ದುದ್ದ ಹೋಬಳಿ ಬೊಮ್ಮೇನಹಳ್ಳಿಯ ಗಿರೀಶ್‌ (40) ಎಂಬವರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟರು. ಅವರು ಬೆಳಗ್ಗಿನ ಉಪಾಹಾರವನ್ನೂ ಸೇವಿಸದೆ ದೇವರ ದರ್ಶನಕ್ಕೆ ಕಾಯುತ್ತಿದ್ದರು ಎನ್ನಲಾಗಿದೆ.

ದೇವಿ ದರ್ಶನ ಪಡೆದ ಚನ್ನಮ್ಮ, ಶೋಭಾ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರ ಪತ್ನಿ ಚನ್ನಮ್ಮ ಅವರು ಪುತ್ರಿ ಶೈಲಜಾ ಜತೆಯಲ್ಲಿ ಗುರುವಾರ ದೇವರ ದರ್ಶನ ಪಡೆದರು. ಕೇಂದ್ರ ಸರಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕೂಡ ಗುರುವಾರ ಸಂಜೆ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next