Advertisement
ಕುಂದಾಪುರ – ಕೊಲ್ಲೂರು ಮಾರ್ಗವಾಗಿ ಸಂಚರಿಸುವಾಗಲೂ ನೆಂಪು ಜಂಕ್ಷನ್ ಪ್ರಮುಖವಾಗಿದೆ. ಇದಲ್ಲದೆ ಆಗುಂಬೆ, ಹೆಬ್ರಿ, ಹಾಲಾಡಿಯಿಂದಲೂ ನೇರಳಕಟ್ಟೆ ಮೂಲಕವಾಗಿ ಇದೇ ಮಾರ್ಗವಾಗಿ ಕೊಲ್ಲೂರಿಗೆ ತೆರಳ ಬೇಕಾಗಿದೆ. ಕುಂದಾಪುರದಿಂದ ಸುಮಾರು 15 ಕಿ.ಮೀ. ದೂರವಿದ್ದರೆ, ಕೊಲ್ಲೂರಿಗೆ ನೆಂಪುವಿನಿಂದ ಸುಮಾರು 24 ಕಿ.ಮೀ. ಅಂತರವಿದೆ.
Related Articles
Advertisement
ಈ ಜಂಕ್ಷನ್ ಮೂಲಕವಾಗಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ ವಾಹನಗಳ ವೇಗ ನಿಯಂತ್ರಿಸಲು ಬ್ಯಾರಿಕೇಡ್ ಹಾಕಲಾಗಿಲ್ಲ ಅಥವಾ ಹಂಪ್ಸ್ ಕೂಡ ಮಾಡಿಲ್ಲ. ಇನ್ನು ರಸ್ತೆಯ ಎರಡೂ ಬದಿಗಳಲ್ಲಿ ರಾತ್ರಿ ವೇಳೆ ವಾಹನ ಸವಾರಿಗೆ ನೆರವಾಗುವಂತಹ ರಿಫ್ಲೈಕ್ಟರ್ಗಳು ಕೂಡ ಇಲ್ಲ. ಬೀದಿ ದೀಪವೂ ಇಲ್ಲ. ಯಾವ ಕಡೆಗೆ ಸಂಚರಿಸಬೇಕು ಎನ್ನುವ ಸರಿಯಾದ ಮಾರ್ಗಸೂಚಿಯೂ ಇಲ್ಲ. ಈಗ ಇರುವ ಹಳೆಯ ಮಾರ್ಗಸೂಚಿಯ ಫಲಕ ನೇರಳಕಟ್ಟೆ ಕಡೆಯಿಂದ ಬರುವ ವಾಹನ ಸವಾರರಿಗೆ ಕಾಣುವುದೇ ಇಲ್ಲ. ಅವರು ವಾಹನದಿಂದ ಇಳಿದು ಬೋರ್ಡ್ ನೋಡಿ ಹೋಗಬೇಕಾದ ಸ್ಥಿತಿಯಿದೆ.
– ಪ್ರಶಾಂತ್ ಪಾದೆ