Advertisement

ಆಲೆಟ್ಟಿ ಗ್ರಾಮದಲ್ಲಿ ಸರಣಿ ಕಳ್ಳತನ ಪ್ರಕರಣ ಪತ್ತೆ

09:53 PM Jul 12, 2023 | Team Udayavani |

ಅರಂತೋಡು : ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿ ಎರಡು ಅಂಗಡಿಗಳ ಬೀಗ ಮುರಿದ ಕಳ್ಳರು ಅಂಗಡಿಯ ಡ್ರಾಯರ್‌ನಲ್ಲಿ ಇರಿಸಿದ್ದ ನಗದಿನೊಂದಿಗೆ ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದ್ದು ,ಕಳ್ಳತನವಾದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಆಲೆಟ್ಟಿ ಗ್ರಾಮದ ನಾಗಪಟ್ಟಣ ಬಸ್‌ ನಿಲ್ದಾಣದ ಜೊತೆಗೆ ಇರುವ ಪಂಚಾಯತ್‌ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿದ್ದ ಪುಷ್ಪರಾಜ್‌ ಎಂಬವರ ಅಂಗಡಿ ಮತ್ತು ಮಿತ್ತಡ್ಕದ ರೋಟರಿ ಶಾಲಾ ಮುಂಭಾಗದಲ್ಲಿನ ಬಸ್‌ ನಿಲ್ದಾಣದ ಪಂಚಾಯತ್‌ ಕಟ್ಟಡದಲ್ಲಿ ಅಂಗಡಿ ನಡೆಸುತ್ತಿದ್ದ ದಾಮೋದರ ರವರ ಅಂಗಡಿಯಿಂದ ಕಳ್ಳತನ ನಡೆದಿದೆ ಎಂದು ತಿಳಿದು ಬಂದಿದೆ.

ರಾತ್ರಿ ವೇಳೆ ಬೀಗಮುರಿದ ಕಳ್ಳರು ದಾಮೋದರ ರವರ ಅಂಗಡಿಯ ಡ್ರವರ್‌ನಲ್ಲಿದ್ದ ಸುಮಾರು 10,000 ನಗದು ದೋಚಿದ್ದಾರೆ, ನಾಗಪಟ್ಟಣ ಅಂಗಡಿಯಲ್ಲಿದ್ದ 500 ರೂ. ರಷ್ಟು ಚಿಲ್ಲರೆ ಹಣ ಕಳವವಾಗಿದ್ದು ಅದೇ ಅಂಗಡಿಯ ಪ್ರಿಡ್ಜ… ನಲ್ಲಿರಿಸಿದ್ದ ಜ್ಯೂಸ್‌ ಕುಡಿದು ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಪೋಲಿಸರಿಗೆ ದೂರು ನೀಡಲಾಗಿದ್ದು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next