Advertisement

Kaniyooru: ಹೊಳೆಗೆ ಬಿದ್ದ ಕಾರು; ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

11:44 PM Dec 28, 2023 | Team Udayavani |

ಕಾಣಿಯೂರು: ಕಾಣಿಯೂರು ಸಮೀಪದ ಬೈತ್ತಡ್ಕ ಮಸೀದಿ ಬಳಿ ಕಾರೊಂದು ಹೊಳೆಗೆ ಬಿದ್ದಿರುವ ಘಟನೆ ಡಿ. 28ರಂದು ನಡೆದಿದೆ.

Advertisement

ಬೆಳಂದೂರಿನ ಜೋತಿಷಿ ಪ್ರಸಾದ್‌ ಪಂಗಣ್ಣಾಯ ಚಲಾಯಿಸುತ್ತಿದ್ದ ಮಾರುತಿ ಬ್ರಿಝಾ ಕಾರು ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದಿದೆ. ಹೊಳೆಯಲ್ಲಿ ನೀರು ಕಡಿಮೆ ಇದ್ದ ಕಾರಣ

ನಡೆಯಬಹುದಾಗಿದ್ದ ದೊಡ್ಡ ಪ್ರಮಾಣದ ಅವಘಡ ತಪ್ಪಿಹೋಗಿದೆ. ಪ್ರಸಾದ್‌ ಪಂಗಣ್ಣಾಯ ಅವರಿಗೆ ಅಲ್ಪ ಸ್ವಲ್ಪ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಲವು ವಾಹನಗಳು ಇದೇ ಹೊಳೆಗೆ ಬಿದ್ದಿವೆೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಮಾರುತಿ ಕಾರೊಂದು ಹೊಳೆಗೆ ಬಿದ್ದು ಇಬ್ಬರು ನೀರುಪಾಲಾದ ಘಟನೆಯ ನೆನಪು ಮಾಸುವ ಮುನ್ನವೇ ಈ ಘಟನೆ ನಡೆದಿದೆ. ಸೇತುವೆಗೆ ತಡೆಗೋಡೆ ನಿರ್ಮಿಸಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಆಗ್ರಹ ವ್ಯಕ್ತವಾಗುತ್ತಿದೆ. ಘಟನೆಯ ದೃಶ್ಯ ಬೈತಡ್ಕ ಮಸೀದಿಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ವೈರಲ್‌ ಆಗುತ್ತಿದೆ. ವಿರುದ್ಧ ದಿಕ್ಕಿನಿಂದ ಕಾರೊಂದು ಬರುತ್ತಿದ್ದು, ಕಾಣಿಯೂರು ಕಡೆಗೆ ಬರುವಾಗ ನಿಯಂತ್ರಣ ತಪ್ಪಿ ಹೊಳೆಗೆ ಬೀಳುತ್ತಿರುವುದು ವೀಡಿಯೋದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next