Advertisement

ಬಾದಾಮಿ: ಕೊಚ್ಚಿ ಹೋದ ಕಾರು; ನಾಲ್ವರು ನೀರುಪಾಲು,ಓರ್ವ ಪಾರು!

10:37 AM Jun 07, 2017 | Team Udayavani |

ಬಾಗಲಕೋಟೆ: ಮುಂಗಾರು ಮಳೆ ಆರಂಭವಾಗುವ ವೇಳೆಯಲ್ಲೇ ಭೀಕರ ಅವಘಡವೊಂದು ನಡೆದಿದ್ದು, ಬಾದಾಮಿ ತಾಲೂಕಿನ ಅನವಾಲ್‌ ಗ್ರಾಮದಲ್ಲಿ  ಮಂಗಳವಾರ ರಾತ್ರಿ ತುಂಬಿ ಹರಿಯುತ್ತಿದ್ದ ಹಳ್ಳ ದಲ್ಲಿ ಕಾರೊಂದು ಕೊಚ್ಚಿ ಹೋಗಿ ನಾಲ್ವರು ನೀರು ಪಾಲಾಗಿದ್ದಾರೆ. ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಈಜಿ ದಡ ಸೇರಿಕೊಂಡಿದ್ದಾನೆ. 

Advertisement

ಯಂಡಿಗೇರಿ ಗ್ರಾಮದ ಯಮನಪ್ಪ ಬಸಪ್ಪ ಹಡಪದ (45), ರುದ್ರಪ್ಪ ಗುರಪ್ಪನವರ (45), ಅಶೋಕ್‌ ಸಾತಪ್ಪನವರ(45),ಮತ್ತು ಹೊಳಬಸಪ್ಪ  ಶಿರಗುಪ್ಪ(55) ಎನ್ನುವವರು ನೀರುಪಾಲಾದ ದುರ್ದೈವಿಗಳು. ಬಸಲಿಂಗಪ್ಪ ಶಿರಗುಪ್ಪ ಈಜಿ ದಡ ಸೇರಿಕೊಂಡಿದ್ದಾರೆ. 

ನಾಲ್ವರ ಶವಗಳನ್ನು ಮೇಲಕ್ಕೆತ್ತಲಾಗಿದೆ. ಪೊಲೀಸರು ಅಗ್ನಿ ಶಾಮಕ ದಳದ ಸಿಬಂದಿಗಳು ಕಾರ್ಯಾಚರಣೆಗಿಳಿದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next