Advertisement

ಮಳೆಗೆ ಕೊಚ್ಚಿ ಹೋದ ಸೇತುವೆ

12:03 PM Oct 14, 2019 | Suhan S |

ಬೈಲಹೊಂಗಲ: ಮುಂಗಾರು ಅಬ್ಬರ ಕಡಿಮೆಯಾದ ಬೆನ್ನಲ್ಲೇ ಹಿಂಗಾರು ಮಳೆಯೂ ಜೋರಾಗಿದ್ದು, ಸಮೀಪದ ಚಿಕ್ಕೊಪ್ಪ-ಕಾರಿಮನಿ ಗ್ರಾಮಗಳ ಸಂಪರ್ಕ ಸೇತುವೆ ರವಿವಾರ ಕೊಚ್ಚಿ ಹೋಗಿದೆ.

Advertisement

ಶನಿವಾರ ಮಧ್ಯರಾತ್ರಿಯಿಂದಲೇ ಗುಡುಗು, ಮಿಂಚಿನೊಂದಿಗೆ ಸುರಿದ ಧಾರಾಕಾರ ಮಳೆಗೆ ಕೆಲವಡೆ ವಿದ್ಯುತ್‌ ಕಂಬಗಳು ಧರೆಗುರುಳಿವೆ. ಆನಿಗೋಳ, ಮಲ್ಲಮ್ಮನ ಬೆಳವಡಿ, ವಕ್ಕುಂದ, ಕೊರವಿನಕೊಪ್ಪ, ಹೊಸೂರ, ಚಿಕ್ಕೊಪ್ಪ, ಕಾರಿಮನಿ, ಮುರಗೋಡ, ಬೈಲಹೊಂಗಲ ಸುತ್ತಮುತ್ತ ಭಾರೀ ಮಳೆಯಾಗಿದೆ.

ಮುರಗೋಡ, ಹೊಸೂರ ರಸ್ತೆ ನಿರ್ಮಾಣ ಕಾಮಗಾರಿಯ ತಗ್ಗು ಪ್ರದೇಶಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿತ್ತು. ಮರಕುಂಬಿ, ಹೊಸೂರ ಗ್ರಾಮದ ಹಳ್ಳಗಳು ತುಂಬಿ ಹರಿದವು. ಚಿಕ್ಕೊಪ್ಪ, ಕಾರಿಮನಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಮಳೆಗೆ ಅರ್ಧಭಾಗ ಕೊಚ್ಚಿ ಹೋಗಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು. ಕೂಡಲೇ ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಿರು ಸೇತುವೆಯನ್ನು ಕೂಡಲೇ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next