Advertisement

Independence ಸಂಭ್ರಮ ಮುಗಿಸಿ ಮರಳುತ್ತಿದ್ದ ಬಾಲಕ ವಿದ್ಯುತ್‌ ತಗಲಿ ಸಾವು

01:10 AM Aug 16, 2024 | Team Udayavani |

ಶಿರಾ: ಸ್ವಾತಂತ್ರ್ಯೋತ್ಸವ ದಿನದಂದು ಸಂಭ್ರಮದಿಂದ ಶಾಲೆಗೆ ಹೋದ ವಿದ್ಯಾರ್ಥಿ ಶವವಾಗಿ ಮನೆಗೆ ಬಂದ ಹೃದಯ ವಿದ್ರಾವಕ ಘಟನೆ ಶಿರಾ ತಾಲೂಕಿನಲ್ಲಿ ಗುರುವಾರ ಸಂಭವಿಸಿದೆ. ಬುಕ್ಕಾಪಟ್ಟಣ ಹೋಬಳಿ ಎಚ್‌.ಕಾವಲ್‌ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಹೇಮಂತ್‌ (8) ಮೃತ ಬಾಲಕ.

Advertisement

ಗುರುವಾರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಸಿಹಿ ತಿಂದು ಸ್ನೇಹಿತರೊಂದಿಗೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ರಸ್ತೆ ಪಕ್ಕದ ವಿದ್ಯುತ್‌ ಕಂಬದ ತಂತಿಯಿಂದ ವಿದ್ಯುತ್‌ ಪ್ರವಹಿಸಿ ಬಾಲಕ ಮೃತಪಟ್ಟನು. ವಿದ್ಯುತ್‌ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next