Advertisement

ಅರಬಿ ಸಮುದ್ರದಲ್ಲಿ  ವಾಯುಭಾರ ಕುಸಿತ

11:52 AM May 19, 2018 | Harsha Rao |

ಮಂಗಳೂರು / ಉಡುಪಿ: ಅರಬಿ ಸಮುದ್ರದಲ್ಲಿ ಈಗಾಗಲೇ ಕಾಣಿಸಿಕೊಂಡಿರುವ “ಸಾಗರ್‌’ ಚಂಡಮಾರುತವು ಗಲ್ಫ್ ಕೊಲ್ಲಿಯತ್ತ ಚಲಿಸಿದ್ದು, ಸೋಮಾಲಿಯಾ ಕಿನಾರೆಗೆ ಬಡಿಯಲಿದೆ. ಈ ಮಧ್ಯೆ ಅರಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೆ„ ಸುಳಿಗಾಳಿ ಮೇ 21ರ ವೇಳೆಗೆ ವಾಯುಭಾರ ಕುಸಿತವಾಗಿ ಮಾರ್ಪಾಡಾಗಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.

Advertisement

ಸುಳಿಗಾಳಿ ಇರುವುದರಿಂದ ಕರ್ನಾಟಕ ಮತ್ತು ಕೇರಳದಲ್ಲಿ ಗಾಳಿ, ಸಿಡಿಲು ಸಹಿತ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿಯಲ್ಲಿ ಎರಡು ದಿನ ಮತ್ತು ದಕ್ಷಿಣ ಒಳನಾಡಿನಲ್ಲಿ ವಾರಪೂರ್ತಿ ಉತ್ತಮ ಮಳೆಯಾಗಲಿದೆ.
ಮೀನುಗಾರರಿಗೆ ಎಚ್ಚರಿಕೆ ಸಮುದ್ರದಲ್ಲಿ ಸುಳಿಗಾಳಿ ಇರು ವುದರಿಂದ ಗಾಳಿಯು ಗಂಟೆಗೆ 60ರಿಂದ 70 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಆದುದರಿಂದ ಮೀನುಗಾರರು ಮುಖ್ಯವಾಗಿ ಆಳಸಮುದ್ರಕ್ಕೆ ಹೋಗಬಾರದು. ತೀರದಲ್ಲಿಯೂ ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next