Advertisement

Finance: ತಮಿಳುನಾಡಿಗೆ 900 ಕೋಟಿ ರೂ. ನೆರವು- ಕೇಂದ್ರ ವಿತ್ತ ಸಚಿವೆ

01:08 AM Dec 23, 2023 | Team Udayavani |

ಹೊಸದಿಲ್ಲಿ: ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಒಟ್ಟು 31 ನಾಗರಿಕರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಹಣ ಕಾಸು ಸಚಿವೆ ನಿರ್ಮಲಾ ಸೀತಾ ರಾಮನ್‌ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, ಪರಿಹಾರವಾಗಿ ಕೇಂದ್ರ ಸರಕಾರವು ಎರಡು ಹಂತಗಳಲ್ಲಿ ತಮಿಳುನಾಡು ಸರಕಾರಕ್ಕೆ 900 ಕೋಟಿ ರೂ. ನೆರವು ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.

Advertisement

ಕೆಲವು ದಿನಗಳ ಹಿಂದಷ್ಟೇ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಪ್ರಧಾನಿಯವರನ್ನು ಭೇಟಿ ಮಾಡಿ 2 ಸಾವಿರ ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು. ತಮಿಳುನಾಡು ಮಳೆ ದುರಂತವನ್ನು ಇದುವರೆಗೆ “ರಾಷ್ಟ್ರೀಯ ವಿಪತ್ತು” ಎಂದು ಘೋಷಣೆ ಆಗಿಲ್ಲ. ಉತ್ತರಾ ಖಂಡದಲ್ಲಿ ಆದ ಅನಾಹುತದ ಸಂದರ್ಭದಲ್ಲೂ ಈ ರೀತಿಯ ಘೋಷಣೆ ಮಾಡಿಲ್ಲ ಎಂದರು ವಿತ್ತ ಸಚಿವೆ.

Advertisement

Udayavani is now on Telegram. Click here to join our channel and stay updated with the latest news.

Next