Advertisement

ವಿಷವಿಟ್ಟ ದುಷ್ಕರ್ಮಿಗಳು; ಬೆಂಗಳೂರಿನಲ್ಲಿ 90 ಪಾರಿವಾಳಗಳ ಸಾವು

09:12 AM Apr 07, 2019 | Vishnu Das |

ಬೆಂಗಳೂರು: ಬುಲ್‌ ಟೆಂಪಲ್‌ನ ಬೂಗಲ್‌ ರಾಕ್‌ ಪಾರ್ಕ್‌ನಲ್ಲಿ ಬರೋಬ್ಬರಿ 90 ಪಾರಿವಾಳಗಳನ್ನು ದುಷ್ಕರ್ಮಿಗಳು ವಿಷವಿಟ್ಟು ಹತ್ಯೆ ಮಾಡಿದ್ದಾರೆ.

Advertisement

ಶನಿವಾರ ಬೆಳಗ್ಗೆ ವಾಯುವಿಹಾರಕ್ಕೆ ಬಂದಿದ್ದ ಸಾರ್ವಜನಿಕರು ಪಾರಿವಾಳಗಳು ಸತ್ತು ಬಿದ್ದಿರುವುದನ್ನು ಕಂಡು ಮರುಗಿದ್ದಾರೆ.

ಶುಕ್ರವಾರ ಅಮವಾಸ್ಯೆ ರಾತ್ರಿಯಂದು ಪಾರಿವಾಳಗಳನ್ನು ವಿಷವಿಕ್ಕಿ ಹತ್ಯೆ ಮಾಡಲಾಗಿದ್ದು, ಚುನಾವಣೆಯ ನಿಮಿತ್ತ ವಾಮಾಚಾರಕ್ಕಾಗಿ ಅಮಾಯಕ ಜೀವಗಳನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಪಾಪಿಗಳಿಗೆ ಸಾರ್ವಜನಿಕರು ಹಿಡಿ ಶಾಪ ಹಾಕಿದರು. ಹಬ್ಬದ ಸಂಭ್ರಮದಲ್ಲಿ ಬಂದಿದ್ದ ಜನರು ಬೆಳ್ಳಂಬೆಳಗ್ಗೆ ದುರಂತ ದೃಶ್ಯ ನೋಡಿ ಭಾರೀ ಬೇಸರ ಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next