Advertisement

ರಾಜ್ಯದಿಂದ 8,000 ಮಂದಿ ಹಜ್‌ಗೆ

10:39 AM Jul 14, 2019 | Team Udayavani |

ಮಂಗಳೂರು: ಈ ವರ್ಷ ರಾಜ್ಯದಿಂದ 8,000 ಮಂದಿ ಹಜ್‌ ಯಾತ್ರೆ ಕೈಗೊಳ್ಳಲಿದ್ದಾರೆ. ರಾಜ್ಯ ಹಜ್‌ ಸಮಿತಿ ವತಿಯಿಂದ ಮಂಗಳೂರು ಹಜ್‌ ಕ್ಯಾಂಪ್‌ ಮೂಲಕ 750 ಮಂದಿ ಹಜ್‌ ಯಾತ್ರೆ ಹೋಗಲಿದ್ದು, ಹಜ್ಜಾಜ್‌ಗಳ ವಿಮಾನ ಯಾತ್ರೆಯ ಉದ್ಘಾಟನೆ ಜು. 17 ಬುಧವಾರ ಬೆಳಗ್ಗೆ 10.30ಕ್ಕೆ ಬಜಪೆ ಅನ್ಸಾರ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ನೆರವೇರಲಿದೆ.

Advertisement

ರಾಜ್ಯ ಹಜ್‌ ಮತ್ತು ವಕ್ಫ್ ಸಚಿವ ಬಿ.ಝಡ್‌. ಝಮೀರ್‌ ಅಹ್ಮದ್‌ ಖಾನ್‌ ಉದ್ಘಾಟಿಸುವರು. ಸಚಿವ ಯು.ಟಿ. ಖಾದರ್‌ ಪ್ರಥಮ ಹಜ್‌ ಯಾತ್ರಾರ್ಥಿಗಳ ಪಾಸ್‌ ಪೋರ್ಟ್‌ ವಿತರಿಸುವರು. ರಾಜ್ಯ ಹಜ್‌ ಸಮಿತಿ ಅಧ್ಯಕ್ಷ ಆರ್‌. ರೋಶನ್‌ ಬೇಗ್‌ ಪ್ರಥಮ ತಂಡದ ವಾಹನಕ್ಕೆ ಹಸಿರು ನಿಶಾನೆ ತೋರಿಸುವರು. ಶಾಸಕ ಉಮಾನಾಥ ಕೋಟ್ಯಾನ್‌ ಅಧ್ಯಕ್ಷತೆ ವಹಿಸುವರು. ರಾಜ್ಯ ಹಜ್‌ ಸಮಿತಿ ಸದಸ್ಯ ಕೆ.ಎಂ. ಅಬೂಬಕರ್‌ ಸಿದ್ದೀಕ್‌ ಮೋಂಟುಗೋಳಿ ಪ್ರಸ್ತಾವನೆಗೈಯುವರು.

ದಶ ವರ್ಷದ ಹಜ್‌ ಕ್ಯಾಂಪ್‌
2009 ಅಕ್ಟೋಬರ್‌ 25ರಂದು ಮಂಗಳೂರು ಹಜ್‌ ಕೇಂದ್ರ ಅಸ್ತಿತ್ವಕ್ಕೆ ಬಂದಿದ್ದು, 9 ವರ್ಷಗಳಲ್ಲಿ ಈ ಹಜ್‌ ನಿರ್ವಹಣ ಸಮಿತಿ ಮೂಲಕ 6,000 ಮಂದಿ ಹಜ್‌ ಯಾತ್ರೆ ಕೈಗೊಂಡಿದ್ದಾರೆ ಎಂದು ಸಮಿತಿ ಅಧ್ಯಕ್ಷ ವೈ. ಮಹಮ್ಮದ್‌ ಕುಂಞಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜು. 17 ಮತ್ತು 18ರಂದು ದ.ಕ. ಮತ್ತು ಉಡುಪಿ ಜಿಲ್ಲೆಯ ಯಾತ್ರಾರ್ಥಿಗಳು ಹಾಗೂ ಜು. 19ರಂದು ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಉಡುಪಿ ಮತ್ತು ಹಾಸನ ಜಿಲ್ಲೆಯ ಯಾತ್ರಾರ್ಥಿಗಳು ಒಟ್ಟು 5 ವಿಮಾನಗಳಲ್ಲಿ ಪ್ರಯಾಣ ಬೆಳೆಸುವರು. ಯಾತ್ರೆ ಮುಗಿಸಿ ಹಾಜಿಗಳು ಆ. 31ರಿಂದ ಸೆ. 2ರ ತನಕ 5 ತಂಡಗಳಾಗಿ ಹಂತ ಹಂತವಾಗಿ ಮಂಗಳೂರಿಗೆ ಹಿಂದಿರುಗಲಿರುವರು ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next