Advertisement

8 ಸಾವಿರ ಮಾವಿನ ಸಸಿ ಮಾರಾಟ

02:43 PM Jun 11, 2019 | Suhan S |

ಶಿವಮೊಗ್ಗ: ನಾಲ್ಕು ವರ್ಷಗಳ ನಂತರ ಜಿಲ್ಲೆಯಲ್ಲಿ ನಡೆದ ಮಾವು, ಹಲಸು, ಪ್ರದರ್ಶನ, ಮಾರಾಟ, ಜೇನು, ಸಾವಯವ ತೋಟಗಾರಿಕೆ ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ತೋಟಗಾರಿಕೆ ಇಲಾಖೆಯಿಂದ ಜೂ. 7ರಿಂದ 9ರ ವರೆಗೆ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಿದ್ದ ಮೇಳದಲ್ಲಿ ಸಾವಿರಾರು ಜನ ಭೇಟಿ ನೀಡಿ ಮಾವು ಮತ್ತು ಹಲಸಿನ ಸ್ವಾದ ಸವಿದರು.

ಸುಮಾರು 60 ಟನ್‌ ಮಾವು, 4 ಟನ್‌ ಹಲಸು, 8 ಸಾವಿರ ಮಾವಿನ ಸಸಿಗಳ ಮಾರಾಟ ಮಾಡಲಾಯಿತು. ಮೇಳಕ್ಕೆ ನಿರೀಕ್ಷೆಗೂ ಮೀರಿ ಜನರಿಂದ ಸ್ಪಂದನೆ ಸಿಕ್ಕಿದೆ. ಅದರಲ್ಲೂ ವೀಕೆಂಡ್‌ನ‌ಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿವಿಧ ಬಡಾವಣೆಗಳಿಂದ ಜನರು ಭಿನ್ನಭಿನ್ನ ಮಾವಿನ ಹಣ್ಣುಗಳನ್ನು ಖರೀದಿಸುವುದಕ್ಕೆ ಆಗಮಿಸಿದ್ದರು.

14-15 ಪ್ರಭೇದದ ಮಾವಿನ ಹಣ್ಣು ಮಾರಾಟಕ್ಕೆ ಇಡಲಾಗಿತ್ತ್ತ್ರು. 45-50 ತಳಿಯ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. 8-10 ಪ್ರಭೇದ ಹಲಸಿನ ತಳಿಯ ಪ್ರದರ್ಶನ ಮತ್ತು 3ರಿಂದ 4 ಪ್ರಭೇದಗಳ ಮಾರಾಟ ನಡೆಯಿತು. ಶಿವಮೊಗ್ಗದಿಂದ ಮೂವರು ವ್ಯಾಪಾರಿಗಳು ಮೇಳದಲ್ಲಿ ಪಾಲ್ಗೊಂಡಿದ್ದರೆ, ರಾಮನಗರ, ಕೋಲಾರ, ಶ್ರೀನಿವಾಸಪುರ, ಚನ್ನರಾಯ ಪಟ್ಟಣದಿಂದಲೂ ವ್ಯಾಪಾರಿಗಳು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next