Advertisement

ಸುಪ್ರೀಂಗೆ ಅರ್ಜಿ ಹಾಕಿದ ವಕೀಲರಿಗೆ 8 ಲಕ್ಷ ರೂ. ದಂಡ

09:21 PM May 17, 2022 | Team Udayavani |

ನವದೆಹಲಿ: ಟ್ರಾಫಿಕ್‌ ಸಾಂಧ್ರತೆ, ವಾಯುಮಾಲಿನ್ಯದ ನಿಯಮಗಳ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಇಬ್ಬರು ವಕೀಲರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, 8 ಲಕ್ಷ ರೂ. ಅನುಕರಣೀಯ ದಂಡ ವಿಧಿಸಿದೆ.

Advertisement

ಸುಪ್ರೀಂ ಕೋರ್ಟ್‌ನ ಇಬ್ಬರು ವಕೀಲರು, ವಾಹನಗಳ 10-15 ವರ್ಷಗಳ ನೋಂದಣಿ ನಿಯಮ ಅನೂರ್ಜಿತ ಮತ್ತು ಕಾನೂನುಬಾಹಿರ ಎಂದು ಅರ್ಜಿ ಸಲ್ಲಿಸಿದ್ದು, ಈ ವಿಚಾರವಾಗಿ ನ್ಯಾಯಾಲಯ ವಕೀಲರನ್ನು ತರಾಟೆಗೆ ತೆಗೆದುಕೊಂಡಿದೆ.

ಇದನ್ನೂ ಓದಿ :  ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

“ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮತ್ತು ಮಾಲಿನ್ಯಕ್ಕೆ ಸಂಬಂಧಪಟ್ಟ ಎಲ್ಲ ಆದೇಶಗಳನ್ನು ನೋಡಿದ ನಂತರವೂ ಈ ರೀತಿಯ ಅರ್ಜಿ ಸಲ್ಲಿಸುತ್ತಿದ್ದೀರ’ ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next