Advertisement

ಭೂವಿವಾದದಲ್ಲಿ ಗುಂಪು ಘರ್ಷಣೆ: 8 ಮಂದಿಗೆ ಗಾಯ; 9 ಮಂದಿ ಅರೆಸ್ಟ್‌

11:12 AM Dec 26, 2018 | udayavani editorial |

ಮುಜಫ‌ರನಗರ : ಮುಜಫ‌ರನಗರ ಜಿಲ್ಲೆಯಲ್ಲಿ ದೀರ್ಘ‌ಕಾಲದಿಂದ ಇತ್ಯರ್ಥವಾಗದೇ ಬಾಕಿ ಉಳಿದಿದ್ದ ಭೂವಿವಾದಕ್ಕೆ ಸಂಬಂಧಿಸಿ ಎರಡು ಗುಂಪುಗಳೊಳಗೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಎಂಟು ಮಂದಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಏಕತಾ ವಿಹಾರ ಪ್ರದೇಶದಲ್ಲಿನ ಖಾಲಿ ನಿವೇಶನಕ್ಕೆ ಸಂಬಂಧಿಸಿ ಅಧಿಕಾರಿಗಳ ಜತೆಗೆ ಚರ್ಚಿಸಿದ ಬಳಿಕ ಉದ್ರಿಕ್ತರಾದ ಎರಡು ಗುಂಪುಗಳು ಬೆತ್ತ, ಕೋಲುಗಳನ್ನು ಬಳಸಿಕೊಂಡು ಪರಸ್ಪರರ ಮೇಲೆ ಹಲ್ಲೆ ನಡೆಸಿದರು. 

ಪೊಲೀಸರು ಘಟನೆ ಸಂಬಂಧ ಒಂಭತ್ತು ಮಂದಿಯನ್ನು ಬಂಧಿಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next