Advertisement

ನಾಳೆಯಿಂದ ಏನೇನು ಬದಲಾವಣೆ? 

11:09 PM Aug 30, 2021 | Team Udayavani |

ಸೆ.1ರಿಂದ ವಿತ್ತೀಯ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹಲವು ಬದಲಾವಣೆಗಳು ಆಗಲಿವೆ. ಹೀಗಾಗಿ ನಿಮ್ಮ ವ್ಯವಹಾರಗಳನ್ನು ನಡೆಸುವ ಮುನ್ನ ಯಾವ ಕ್ಷೇತ್ರದಲ್ಲಿ ಏನು ಬದಲಾವಣೆಯಾಗಲಿದೆ ಎಂಬುದರ ಬಗ್ಗೆ ಪಕ್ಷಿ ನೋಟ ಇಲ್ಲಿದೆ.

Advertisement

ಪಿಎಫ್ – ಆಧಾರ್‌ ಲಿಂಕ್‌ :

ವೇತನ ಪಡೆಯುವ ವರ್ಗಕ್ಕೆ ಈ ಅಂಶ ಪ್ರಧಾನವಾದದ್ದು. ಒಂದು ವೇಳೆ ಲಿಂಕ್‌ ಮಾಡಿಲ್ಲದೇ ಇದ್ದರೆ ಉದ್ಯೋಗದಾತರು ಉದ್ಯೋಗಿಗಳ ಖಾತೆಗೆ ತಮ್ಮ ಪಾಲಿನ ಪಿಎಫ್ ಜಮೆ ಅಸಾಧ್ಯ.

ಸಿಲಿಂಡರ್‌ ದರ ಹೆಚ್ಚಳ :

ಪ್ರತೀ ತಿಂಗಳ ಆರಂಭದಲ್ಲಿ ಸರಕಾರ ಅಡುಗೆ ಅನಿಲ ಪರಿಷ್ಕರಿಸುತ್ತದೆ. ಈಗಾಗಲೇ ಸಬ್ಸಿಡಿ ರಹಿತ ಸಿಲಿಂಡರ್‌ ದರವನ್ನು 25 ರೂ.ಗಳನ್ನು ಹೆಚ್ಚಿಸಲಾಗಿದೆ.

Advertisement

ಪಾನ್‌- ಆಧಾರ್‌ ಲಿಂಕ್‌ :

ವಿಶೇಷವಾಗಿ ಎಸ್‌ಬಿಐನಲ್ಲಿ ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದವರಿಗೆ ಈ ನಿಯಮ ಅನ್ವಯ. ಪಾನ್‌ ಮತ್ತು ಆಧಾರ್‌ ಲಿಂಕ್‌ ಮಾಡದೇ ಇದ್ದರೆ ವಿತ್ತೀಯ ವಹಿವಾಟು ನಡೆಸಲು ಅಸಾಧ್ಯ. ಹೀಗಾಗಿ ಪಾನ್‌- ಆಧಾರ್‌ ಲಿಂಕ್‌ಗೆ ಕ್ರಮ ಕೈಗೊಳ್ಳಬೇಕು.

ಚೆಕ್‌ ಕ್ಲಿಯರೆನ್ಸ್‌ :

ಪಾಸಿಟಿವ್‌ ಪೇ ಸಿಸ್ಟಮ್‌ ಮೂಲಕ ಚೆಕ್‌ಗಳನ್ನು ಕ್ಲಿಯರೆನ್ಸ್‌ಗೆ ಕಳುಹಿಸಲಾಗುತ್ತದೆ. 50 ಸಾವಿರ ರೂ.ಗಳಿಗಿಂತ ಹೆಚ್ಚು ಮೊತ್ತ ಅಥವಾ 5 ಲಕ್ಷ ರೂ.ಗಳಿಗಿಂತ ಹೆಚ್ಚು ಮೊತ್ತದ ಚೆಕ್‌ ಅನ್ನು ನೀಡುವುದಿದ್ದರೆ, ಮುಂಚಿತವಾಗಿಯೇ ಬ್ಯಾಂಕ್‌ ಶಾಖೆಗೆ ಮಾಹಿತಿ ನೀಡಬೇಕು. ಬ್ಯಾಂಕ್‌ ಶಾಖೆಯ ಅಧಿಕಾರಿಗಳು ಮಾಹಿತಿಯನ್ನು ಆಧರಿಸಿ ಚೆಕ್‌ ಅನ್ನು ಕ್ಲಿಯರೆನ್ಸ್‌ಗೆ ಕಳುಹಿಸುತ್ತಾರೆ. ಮುಂಚಿತ ಮಾಹಿತಿ ನೀಡದೇ ಇದ್ದರೆ, ಚೆಕ್‌ ಬೌನ್ಸ್‌ ಆಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next