Advertisement

ಜಮೀನಿನಲ್ಲಿ ದನ ಕಟ್ಟುವ ವಿಚಾರಕ್ಕೆ ಗಲಾಟೆ: ವೃದ್ಧನ ಹತ್ಯೆ; ಶಿಕ್ಷಕ ಸೇರಿ ನಾಲ್ವರ ಬಂಧನ

12:10 PM Aug 07, 2023 | keerthan |

ಸುಲ್ತಾನಪುರ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿ 70 ವರ್ಷದ ವ್ಯಕ್ತಿಯನ್ನು ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ಕುರೇಭಾರ್ ಪ್ರದೇಶದ ಸಾಧೋಭಾರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ.

Advertisement

ಘಟನೆಯಲ್ಲಿ ಮೃತ ವೃದ್ಧನ ಮಗ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಮಗ್ಗು ರಾಮ್ ಎಂದು ಗುರುತಿಸಲಾಗಿದೆ. ಆತನ ಮಗ ವಿಜಯ್ ಗಾಯಗೊಂಡಿದ್ದಾರೆ.

ಮಗ್ಗು ರಾಮ್ ತನ್ನ ಹಸುವನ್ನು ವಿವಾದಿತ ಜಮೀನಿನಲ್ಲಿ ಸಾಕಲು ಕೆಲವು ಜನರೊಂದಿಗೆ ಜಗಳವಾಡಿದ್ದು, ಇದರ ಪರಿಣಾಮವಾಗಿ ಅವರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಕಾಫಿ ಡೇಯಲ್ಲಿ ಭೇಟಿ…ಪೊಲೀಸ್‌ ಅಧಿಕಾರಿ ಮಗಳನ್ನೇ ಪ್ರೀತಿಸಿ, ವರಿಸಿದ್ದ ಚಿನ್ನಾರಿ ಮುತ್ತ..

Advertisement

ತಂದೆಯನ್ನು ಉಳಿಸಲು ಮಗ ವಿಜಯ್ ಮಧ್ಯ ಪ್ರವೇಶಿಸಿದ್ದು, ಈ ವೇಳೆ ದುಷ್ಕರ್ಮಿಗಳು ಆತನ ಮೇಲೂ ಹಲ್ಲೆ ನಡೆಸಿದ್ದಾರೆ. ಪೊಲೀಸರು ಇಬ್ಬರನ್ನೂ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಮಗ್ಗು ರಾಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ವಿಜಯ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ, ರಾಮ್ ಅವರ ಸೋದರಳಿಯ ಮಾಣಿಕ್ ಲಾಲ್ ಅವರು ಎಫ್ಐಆರ್ ದಾಖಲಿಸಿದ್ದಾರೆ.

ಶಿಕ್ಷಕ ಅಮರನಾಥ್, ಸಂಬಂಧಿ ಜವಾಹರಲಾಲ್, ರಾಜವತಿ ಮತ್ತು ವಿಶ್ವನಾಥ್ ಅವರನ್ನು ಬಂಧಿಸಲಾಗಿದೆ ಎಂದು ಕುರೇಭಾರ್ ಎಸ್‌ಎಚ್‌ಒ ಪ್ರವೀಣ್ ಕುಮಾರ್ ಯಾದವ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next