Advertisement

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 70 ಲಕ್ಷ ನೆರವು

10:59 PM Jul 09, 2019 | Team Udayavani |

ಬೆಂಗಳೂರು: ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಆರೋಗ್ಯ ಮತ್ತಿತರ ಸಮಸ್ಯೆಗಳ ಬಗ್ಗೆ ಸಲ್ಲಿಸಿದ್ದ ಆಹವಾಲುಗಳ ಪೈಕಿ 89 ಜನರಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 70.60 ಲಕ್ಷ ರೂ. ನೆರವು ನೀಡಲಾಗಿದೆ.

Advertisement

ಯಾದಗಿರಿ ಜಿಲ್ಲೆಯ ಚಂದರಕಿ ಗ್ರಾಮದಲ್ಲಿ 45 ಅರ್ಜಿದಾರರಿಗೆ 32.70 ಲಕ್ಷ ರೂ., ರಾಯಚೂರು ಜಿಲ್ಲೆ ಕರೆಗುಡ್ಡ ಗ್ರಾಮದಲ್ಲಿ 28 ಜನರಿಗೆ 19.94 ಲಕ್ಷ ರೂ. ಹಾಗೂ ಬೀದರ್‌ ಜಿಲ್ಲೆಯ ಉಜಳಂಬ ಗ್ರಾಮದಲ್ಲಿ 16 ಜನರಿಗೆ 18.79 ಲಕ್ಷ ರೂ. ನೆರವು ನೀಡಲು ಮುಖ್ಯಮಂತ್ರಿಯವರು ಮಂಜೂರಾತಿ ನೀಡಿದ್ದಾರೆ.

ಈ ಫ‌ಲಾನುಭವಿಗಳು ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಮೂತ್ರಪಿಂಡ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ ಮತ್ತಿತರ ವೈದ್ಯಕೀಯ ಸೌಲಭ್ಯ ಹಾಗೂ ಆರ್ಥಿಕ ನೆರವು ಕೋರಿ ಅರ್ಜಿ ಸಲ್ಲಿಸಿದ್ದರು ಎಂದು ಮುಖ್ಯಮಂತ್ರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next