Advertisement

Bharatpur; ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ 7 ಯುವಕರು ನೀರು ಪಾಲು

05:57 PM Aug 11, 2024 | Team Udayavani |

ಜೈಪುರ: ರಾಜಸ್ಥಾನದ ಭರತ್‌ಪುರದಲ್ಲಿ ಭಾನುವಾರ(ಆಗಸ್ಟ್11) ನದಿಯಲ್ಲಿ ಸ್ನಾನ ಮಾಡುತ್ತಿದ್ದ ಏಳು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಪೊಲೀಸರ ಪ್ರಕಾರ, ಶ್ರೀನಗರ ಗ್ರಾಮದ ಮೂವರು ಸೋದರ ಸಂಬಂಧಿಗಳು ಸೇರಿದಂತೆ ಎಂಟು ಯುವಕರು ಬಂಗಂಗಾ ನದಿಗೆ ಸ್ನಾನ ಮಾಡಲು ಹೋಗಿದ್ದರು.

”ಒಬ್ಬರ ನಂತರ ಒಬ್ಬರು ಆಳವಾದ ನೀರಿನ ಗುಂಡಿಗೆ ಜಾರಿಬಿದ್ದು ಮುಳುಗಿ ಸಾವನ್ನಪ್ಪಿದ್ದಾರೆ.ಒಬ್ಬ ಮಾತ್ರ ಪಾರಾಗಿ ಗ್ರಾಮಕ್ಕೆ ಬಂದು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ”ಎಂದು ಬಯಾನಾ ಸದರ್ ಎಸ್‌ಎಚ್‌ಒ ಬಲರಾಮ್ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ: SUV ನದಿಯಲ್ಲಿ ಕೊಚ್ಚಿ ಹೋಗಿ ಒಂದೇ ಕುಟುಂಬದ 7 ಮಂದಿ ಸಾವು, ಮೂವರು ನಾಪತ್ತೆ

ಗ್ರಾಮಸ್ಥರು ಸ್ಥಳಕ್ಕಾಗಮಿಸಿ ಶವಗಳನ್ನು ಹೊರತೆಗೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ದುರ್ದೈವಿ ಯುವಕರು ಪವನ್ ಸಿಂಗ್ ಜಾತವ್ (20), ಸೌರಭ್ ಜಾತವ್ (18), ಮತ್ತು ಗೌರವ್ ಜಾತವ್ (16) ಎಂದು ಗುರುತಿಸಲಾಗಿದ್ದು, ಮೂವರೂ ಸೋದರ ಸಂಬಂಧಿಗಳಾದ ಭೂಪೇಂದ್ರ ಜಾತವ್ (18), ಶಾಂತನು ಜಾತವ್ (18), ಲಖಿ ಜಾತವ್ (20) ಮತ್ತು ಪವನ್ ಜಾತವ್ (22) ಎನ್ನುವವರಾಗಿದ್ದಾರೆ.

Advertisement

ಮೃತ ಯುವಕರೆಲ್ಲರೂ ಸಂಬಂಧಿಕರಾಗಿದ್ದು, ಒಂದೇ ಗ್ರಾಮದವರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next