Advertisement

ಶಿರಸಿ : ಅಂದರ್ ಬಾಹರ್ ಆಡುತ್ತಿದ್ದ ಗುಂಪಿನ ಮೇಲೆ ದಾಳಿ : 7 ಜನರ ಬಂಧನ

07:10 PM Jun 24, 2021 | Team Udayavani |

ಶಿರಸಿ: ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ ತಂಡದ ಮೇಲೆ ಡಿ.ಎಸ್.ಪಿ. ರವಿ ನಾಯ್ಕ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ 7 ಜನರನ್ನು ಬಂಧಿಸಿರುವ ಘಟನೆ  ನಗರದ ಆರ್.ಟಿ.ಓ. ಆಪೀಸ್ ಕಚೇರಿ ಹತ್ತಿರ ನಡೆದಿದ್ದು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ನೂರ ಅಹ್ಮದ್ ಮಹಮ್ಮದ್ ಹನೀಫ್ ಭಟ್ಕಳ 27 ವರ್ಷ  ಇಂದಿರಾನಗರ, ಇದಾಯತ್ ತಸಲುಲ್ಲಾ ಖಾಜಿ ೩೧ ವರ್ಷ ಕಸ್ತೂರಾ ಬಾ ನಗರ,  ಮೊಹಮ್ಮದ್ ಯಾಸೀನ್ ಹಬೀಭ್ ರೆಹಮಾನ ಭಟ್ಕಳ  24 ವರ್ಷ, ಆಫ್ರೀದ್ ಮಹಮ್ಮದ್ ಹನೀಫ್ ಭಟ್ಕಳ23 ವರ್ಷ ಇಂಧಿರಾನಗರ, ಹುಸೇನ್ ಪಾರೂಕ್ ಮೀರಾಪುರ  37 ವರ್ಷ ಹೊನ್ನಾವರ, ಅಬ್ದುಲ್ ಖಾದರ  ಪರೀದ ಹಸನ್  30 ವರ್ಷ ಇಂದಿರಾನಗರ ಹಾಗೂ ಮಹಮ್ಮದ್ ಇಮ್ರಾನ್ ಶೇಕ್ 32 ವರ್ಷ  ಕಸ್ತೂರಾ ಬಾ ನಗರ ಎಂಬುವರೇ  ಬಂಧಿತ ಆರೋಪಿಗಳಾಗಿದ್ದಾರೆ.  ಬಂಧಿತ ಆರೋಪಿಗಳಿಂದ  6410 ರೂಪಾಯಿ ನಗದು,  ೭ ಮೊಬೈಲ್ ಹಾಗೂ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಡಿ.ವಾಯ್.ಎಸ್.ಪಿ. ರವಿ ಡಿ. ನಾಯ್ಕ ನೇತೃತ್ವದಲ್ಲಿ ಮಾರುಕಟ್ಟೆ ಪಿ.ಎಸ್.ಐ. ಭೀಮಾ ಶಂಕರ ದಾಳಿ ನಡೆಸಿದ್ದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next